ವಿಎಚ್ಪಿ ಕೇಂದ್ರೀಯ ಆಡಳಿತ ಮಂಡಳಿ ಸಭೆ ನಡೆಯುತ್ತಿರುವ ಚೆನ್ನೈ ಸಮೀಪದ ಕಾಂಚೀಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್, ‘ಇತ್ತೀಚೆಗೆ ಭಾರತದಾದ್ಯಂತ ‘ಧಾರ್ಮಿಕ ಮತಾಂಧರು’ ಎಸಗಿರುವ ಹಿಂಸಾಚಾರವನ್ನು ವಿಎಚ್ಪಿ ಖಂಡಿಸುತ್ತದೆ. ಇಂಥ ಮತಾಂಧರಿಂದ ಹಾನಿಗೊಳಗಾದ ಹಿಂದೂಗಳಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು. ಹಿಂದೂ ಸಮಾಜವು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು, ಹಿಂಸಾಚಾರವನ್ನು ವಿರೋಧಿಸಬೇಕು’ ಎಂದು ಕರೆ ನೀಡಿದರು.