ಮೂಲಗಳ ಪ್ರಕಾರ, ಭೋಪಾಲದ ಸಾಕೇತ್ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವೊಂದರಲ್ಲಿ ಪ್ರಜ್ಞಾ ಭಾಗವಹಿಸಿದ್ದರು. ಅಲ್ಲಿ ಮೈದಾನದಲ್ಲಿ ಕೆಲವು ಮಂದಿ ಬಾಸ್ಕೆಟ್ಬಾಲ್ ಆಡುತ್ತಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಅಂಗಣಕ್ಕೆ ತೆರಳಿ ಬಾಸ್ಕೆಟ್ಬಾಲ್ ಕೌಶಲ್ಯತೆಯನ್ನು ಮೆರೆದಿದ್ದಾರೆ. ಬಲಗೈಯಿಂದ ಚೆಂಡನ್ನು ಡ್ರಿಬಲ್ ಮಾಡುವ ಮೂಲಕ ನೆರೆದಿದ್ದವರ ಕೈಚಪ್ಪಾಳೆ ಗಿಟ್ಟಿಸಿಕೊಂಡರು.