<p><strong>ನವದೆಹಲಿ: </strong>ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ತನಿಖೆಗೆ ಆದೇಶಿಸಿದೆ.</p>.<p>ತನಿಖೆ ನಡೆಸಲು ಮತ್ತು ಪರಿಹಾರ ಕ್ರಮ ಸೂಚಿಸಲು ಸಚಿವಾಲಯ ಡಿಆರ್ಡಿಒ ಪ್ರಯೋಗಾಲಯಗಳ ಎಸ್ಎಎಂ (ಸಿಸ್ಟಂ ಅನಾಲಿಸಿಸ್ ಮತ್ತು ಮಾಡೆಲಿಂಗ್) ಕ್ಲಸ್ಟರ್ ಅಡಿ ಬರುವ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರಕ್ಕೆ(ಸಿಎಫ್ಇಇಎಸ್) ಪತ್ರ ಬರೆದಿದೆ.</p>.<p>ಎಲೆಕ್ಟ್ರಿಕ್ ವಾಹನಗಳ ಸುಧಾರಣೆಗೆ ಪರಿಹಾರ ಕ್ರಮಗಳ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಸೂಚಿಸುವಂತೆ ಪತ್ರದಲ್ಲಿ ತಿಳಿಸಿದೆ.</p>.<p>‘ಬೆಂಕಿ ಹತ್ತಿಕೊಳ್ಳಲು ಹೊರಗಿನ ಪರಿಸರ ಅಥವಾ ವಾಹನಗಳ ವಿನ್ಯಾಸದಲ್ಲಿ ಲೋಪಗಳಿವೆಯೇ ಎಂಬುದನ್ನು ತಿಳಿಯಲು ಸಚಿವಾಲಯ ಮುಂದಾಗಿದೆ. ತನಿಖಾ ತಂಡಗಳು ಪುಣೆ, ಬೆಂಗಳೂರು (ಓಲಾ ಪ್ರಧಾನ ಕಚೇರಿ) ಮತ್ತು ತಮಿಳುನಾಡಿನ ವೆಲ್ಲೂರಿಗೆ ಭೇಟಿ ನೀಡಲಿವೆ’ ಎಂದು ಸಚಿವಾಯಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ತನಿಖೆಗೆ ಆದೇಶಿಸಿದೆ.</p>.<p>ತನಿಖೆ ನಡೆಸಲು ಮತ್ತು ಪರಿಹಾರ ಕ್ರಮ ಸೂಚಿಸಲು ಸಚಿವಾಲಯ ಡಿಆರ್ಡಿಒ ಪ್ರಯೋಗಾಲಯಗಳ ಎಸ್ಎಎಂ (ಸಿಸ್ಟಂ ಅನಾಲಿಸಿಸ್ ಮತ್ತು ಮಾಡೆಲಿಂಗ್) ಕ್ಲಸ್ಟರ್ ಅಡಿ ಬರುವ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರಕ್ಕೆ(ಸಿಎಫ್ಇಇಎಸ್) ಪತ್ರ ಬರೆದಿದೆ.</p>.<p>ಎಲೆಕ್ಟ್ರಿಕ್ ವಾಹನಗಳ ಸುಧಾರಣೆಗೆ ಪರಿಹಾರ ಕ್ರಮಗಳ ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಸೂಚಿಸುವಂತೆ ಪತ್ರದಲ್ಲಿ ತಿಳಿಸಿದೆ.</p>.<p>‘ಬೆಂಕಿ ಹತ್ತಿಕೊಳ್ಳಲು ಹೊರಗಿನ ಪರಿಸರ ಅಥವಾ ವಾಹನಗಳ ವಿನ್ಯಾಸದಲ್ಲಿ ಲೋಪಗಳಿವೆಯೇ ಎಂಬುದನ್ನು ತಿಳಿಯಲು ಸಚಿವಾಲಯ ಮುಂದಾಗಿದೆ. ತನಿಖಾ ತಂಡಗಳು ಪುಣೆ, ಬೆಂಗಳೂರು (ಓಲಾ ಪ್ರಧಾನ ಕಚೇರಿ) ಮತ್ತು ತಮಿಳುನಾಡಿನ ವೆಲ್ಲೂರಿಗೆ ಭೇಟಿ ನೀಡಲಿವೆ’ ಎಂದು ಸಚಿವಾಯಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>