<p><strong>ನವದೆಹಲಿ:</strong> ಕೇರಳದಲ್ಲಿನ ಉದ್ದೇಶಿತ ಸೆಮಿ-ಹೈ-ಸ್ಪೀಡ್ ಕೆ-ರೈಲ್-ಸಿಲ್ವರ್ಲೈನ್ ಯೋಜನೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೇರಳದ ಯುಡಿಎಫ್ ಸಂಸದರು ಆರೋಪಿಸಿದ್ದಾರೆ.</p>.<p>ಗುರುವಾರದ ಲೋಕಸಭೆ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರು, 'ಗುರುವಾರ ಬೆಳಗ್ಗೆ 10.45ರ ವೇಳೆಗೆ ವಿಜಯ್ಚೌಕ್ನಿಂದ ಮಹಿಳಾ ಸಂಸದರು ಸೇರಿದಂತೆ 12 ಸಂಸದರು ಪ್ರತಿಭಟನೆ ಕೈಗೊಂಡೆವು. ಈ ವೇಳೆ ಯಾವುದೇ ಪ್ರಚೋದನಾಕಾರಿ ರೀತಿಯಾಗಿ ನಡೆದುಕೊಳ್ಳದಿದ್ದರೂ, ದೆಹಲಿ ಪೊಲೀಸರು ನಮ್ಮನ್ನು ತಡೆದರು. ಈ ವೇಳೆ ನಾವು ಸಂಸದರು ಎಂದು ಹೇಳಿದರೂ, ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿ, ನೂಕಾಡಿದ್ದಾರೆ' ಎಂದು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಆರ್ಎಸ್ಪಿ ಸಂಸದ ಎನ್.ಕೆ ಪ್ರೇಮಚಂದ್ರನ್ ಅವರು, ಇದು ದುರದೃಷ್ಟಕರ ಘಟನೆ. ಪ್ರತಿಭಟನೆ ನಡೆಸುತ್ತಿರುವುದು ಸಂಸದರು ಎಂದು ತಿಳಿದಿದ್ದರೂ, ಅವರನ್ನು ಪೊಲೀಸರು ಸಂಸತ್ ಆವರಣಕ್ಕೆ ಬಿಟ್ಟುಕೊಂಡಿಲ್ಲ ಎಂದು ದೂರಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ಈ ವಿಚಾರವನ್ನು ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇರಳದಲ್ಲಿನ ಉದ್ದೇಶಿತ ಸೆಮಿ-ಹೈ-ಸ್ಪೀಡ್ ಕೆ-ರೈಲ್-ಸಿಲ್ವರ್ಲೈನ್ ಯೋಜನೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೇರಳದ ಯುಡಿಎಫ್ ಸಂಸದರು ಆರೋಪಿಸಿದ್ದಾರೆ.</p>.<p>ಗುರುವಾರದ ಲೋಕಸಭೆ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರು, 'ಗುರುವಾರ ಬೆಳಗ್ಗೆ 10.45ರ ವೇಳೆಗೆ ವಿಜಯ್ಚೌಕ್ನಿಂದ ಮಹಿಳಾ ಸಂಸದರು ಸೇರಿದಂತೆ 12 ಸಂಸದರು ಪ್ರತಿಭಟನೆ ಕೈಗೊಂಡೆವು. ಈ ವೇಳೆ ಯಾವುದೇ ಪ್ರಚೋದನಾಕಾರಿ ರೀತಿಯಾಗಿ ನಡೆದುಕೊಳ್ಳದಿದ್ದರೂ, ದೆಹಲಿ ಪೊಲೀಸರು ನಮ್ಮನ್ನು ತಡೆದರು. ಈ ವೇಳೆ ನಾವು ಸಂಸದರು ಎಂದು ಹೇಳಿದರೂ, ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿ, ನೂಕಾಡಿದ್ದಾರೆ' ಎಂದು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಆರ್ಎಸ್ಪಿ ಸಂಸದ ಎನ್.ಕೆ ಪ್ರೇಮಚಂದ್ರನ್ ಅವರು, ಇದು ದುರದೃಷ್ಟಕರ ಘಟನೆ. ಪ್ರತಿಭಟನೆ ನಡೆಸುತ್ತಿರುವುದು ಸಂಸದರು ಎಂದು ತಿಳಿದಿದ್ದರೂ, ಅವರನ್ನು ಪೊಲೀಸರು ಸಂಸತ್ ಆವರಣಕ್ಕೆ ಬಿಟ್ಟುಕೊಂಡಿಲ್ಲ ಎಂದು ದೂರಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ಈ ವಿಚಾರವನ್ನು ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>