ಗುರುವಾರದ ಲೋಕಸಭೆ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರು, 'ಗುರುವಾರ ಬೆಳಗ್ಗೆ 10.45ರ ವೇಳೆಗೆ ವಿಜಯ್ಚೌಕ್ನಿಂದ ಮಹಿಳಾ ಸಂಸದರು ಸೇರಿದಂತೆ 12 ಸಂಸದರು ಪ್ರತಿಭಟನೆ ಕೈಗೊಂಡೆವು. ಈ ವೇಳೆ ಯಾವುದೇ ಪ್ರಚೋದನಾಕಾರಿ ರೀತಿಯಾಗಿ ನಡೆದುಕೊಳ್ಳದಿದ್ದರೂ, ದೆಹಲಿ ಪೊಲೀಸರು ನಮ್ಮನ್ನು ತಡೆದರು. ಈ ವೇಳೆ ನಾವು ಸಂಸದರು ಎಂದು ಹೇಳಿದರೂ, ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿ, ನೂಕಾಡಿದ್ದಾರೆ' ಎಂದು ಹೇಳಿದರು.