ಧರಣಿ ನಿರತ ಸ್ಥಳದಲ್ಲಿ ಕಂದಸಾಮಿ ಅವರನ್ನು ಭೇಟಿ ಮಾಡಿದ ನಾರಾಯಣ ಸ್ವಾಮಿ ಅವರು ಇದೇ 21 ಇಲ್ಲವೇ 22ರಂದು ರಾಷ್ಟ್ರಪತಿ ಬಳಿ ಸಚಿವರ ನಿಯೋಗ ಕರೆದೊಯ್ಯಲಾಗುತ್ತದೆ. ಈಗ ಉದ್ಭವಿಸಿರುವ ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನಿಸಬೇಕೆಂದು ಅವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಹೀಗಾಗಿ ಸಚಿವರು ಧರಣಿ ಅಂತ್ಯಗೊಳಿಸಿದರು.