ಕೊಲ್ಕತ್ತಾ:ಕಾಳಿ ಪೂಜೆಯ ವೇಳೆ ಪಟಾಕಿ ಸುಡುವ ಮೂಲಕ 'ಪಟಾಕಿ ನಿಷೇಧಕಾನೂನು' ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಜಿಪಿಎಸ್ ಆಧಾರಿತ ಸೌಂಡ್ ಮಾನಿಟರಿಂಗ್ ಸಾಧನವನ್ನು ಪೊಲೀಸರಿಗೆ ನೀಡಲಾಗಿದೆ.
ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯು 1,000ಕ್ಕಿಂತಲೂ ಹೆಚ್ಚು ಸಾಧನಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವಿತರಿಸಿದೆ.
ಕಾಳಿ ಪೂಜೆ ಮತ್ತು ಇತರ ಹಬ್ಬಗಳ ಆಚರಣೆ ವೇಳೆ ಪಟಾಕಿ ಮಾರಾಟ ಮತ್ತು ಪಟಾಕಿ ಸುಡುವುದನ್ನು ಕೊಲ್ಕತ್ತಾ ಹೈಕೋರ್ಟ್ ನಿಷೇಧಿಸಿದೆ. ಪಟಾಕಿ ಸುಡುತ್ತಿರುವ ಜಾಗ,ದಿನಾಂಕ ಮತ್ತು ಸಮಯವನ್ನು ಈ ಸಾಧನ ಪತ್ತೆ ಹಚ್ಚುವುದಲ್ಲದೆ ಪಟಾಕಿ ಸದ್ದಿನ ಪ್ರಮಾಣವನ್ನೂ ಇದು ಅಳೆಯುತ್ತದೆ. ಈ ಸಾಧನಕ್ಕೆ ಪ್ರಿಂಟರ್ ಕನೆಕ್ಟ್ ಮಾಡಿದರೆ ಮುದ್ರಿತ ಪ್ರತಿಯನ್ನೂ ತೆಗೆದುಕೊಳ್ಳಬಹುದು ಎಂದು ಡಬ್ಲ್ಯುಬಿಪಿಸಿಬಿ ಅಧ್ಯಕ್ಷ ಕಲ್ಯಾಣ ರುದ್ರ ಹೇಳಿದ್ದಾರೆ.
ಈ ಸಾಧನವನ್ನು ಬಳಸುವ ರೀತಿ ಹೇಗೆ ಎಂಬುದನ್ನು ನಾವು ಪೊಲೀಸರಿಗೆ ಹೇಳಿ ಕೊಟ್ಟಿದ್ದೇವೆ. ಡಬ್ಲ್ಯುಬಿಪಿಸಿಬಿ ತಂಡವು ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಪಿಎಸ್ ಆಧಾರಿತ ಈ ಸಾಧನವನ್ನು ರಾಜ್ಯದ ಐಟಿ ವಿಭಾಗ ನಿರ್ಮಿಸಿದ್ದು ಕಳೆದ ವರ್ಷವೇ ಇದರ ಬಳಕೆ ಆರಂಭವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.