‘ಯಡಿಯೂರಪ್ಪ ಅವರು ಕುಟುಂಬವನ್ನು ದೂರ ಇಡಬೇಕು ಎಂದು ಹೇಳುತ್ತೀಯಲ್ಲ. ನೀನು ಮೊದಲು ನಿನ್ನ ಹೆಂಡತಿ ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸು. ಆಮೇಲೆ ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡು. ನೀನು ಬಿಜೆಪಿ ಬಿಟ್ಟು ಹೋದಾಗ ಶೆಟ್ಟರು, ಭಟ್ಟರ ಪಕ್ಷ ಎಂದು ಬಿಜೆಪಿಯನ್ನು ಟೀಕಿಸಿರಲಿಲ್ಲವೇ? ಆಗ ಪ್ರಲ್ಹಾದ ಜೋಶಿ, ಅನಂತಕುಮಾರ್, ಜಗದೀಶ ಶೆಟ್ಟರ್ ಅವರನ್ನು ಒಪ್ಪಿಸಿ ನಿನ್ನನ್ನು ಕರೆತಂದಿದ್ದು ಯಡಿಯೂರಪ್ಪ ಅವರಲ್ಲವೇ? ಅವೆಲ್ಲ ಮರೆತುಹೋಯಿತಾ’ ಎಂದು ಕಿಡಿಕಾರಿದರು.