<p><strong>ಚಿಕ್ಕಜಾಜೂರು: </strong>ಸಮೀಪದ ಚಿಕ್ಕಎಮ್ಮಿಗನೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 88 ವರ್ಷದ ವೃದ್ಧೆ ದ್ರಾಕ್ಷಾಯಣಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.</p>.<p>ದ್ರಾಕ್ಷಾಯಣಮ್ಮ ಅವರು ಜಿಲ್ಲೆಯಲ್ಲೇ ಹಿರಿಯ ವಯಸ್ಸಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಇದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ ಸದಸ್ಯೆಯಾಗಿದ್ದ ಅವರಿಗೀಗ ಅಧ್ಯಕ್ಷೆ ಪಟ್ಟ.</p>.<p>ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ನಟರಾಜ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ 17 ಸದಸ್ಯರು ಮತದಾನ ಮಾಡಿದರು.</p>.<p>ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದ್ರಾಕ್ಷಾಯಣಮ್ಮ 11 ಮತ, ಪ್ರತಿಸ್ಪರ್ಧಿ ಪದ್ಮಾವತಿ ಐದು ಮತಗಳನ್ನು ಪಡೆದರು.</p>.<p>‘ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಲು ಮಕ್ಕಳು ಹಾಗೂ ನೆರೆಹೊರೆಯವರ ಪ್ರೇರಣೆಯೇ ಕಾರಣ. ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಜನಸೇವೆ ಮಾಡಿದ್ದಾರೆ. ನಾನೂ ಜನಸೇವೆ ಮಾಡುವೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಸ್ಥಳೀಯ ಶಾಖೆಯ ಅಧಿಕಾರಿ ಬಿ.ನಾಗರಾಜ್ ಅವರ ಪ್ರೋತ್ಸಾಹ ಮರೆಯುವಂತಿಲ್ಲ’ ಎನ್ನುತ್ತಾರೆ ದ್ರಾಕ್ಷಾಯಣಮ್ಮ.</p>.<p>ಆಗಿನ ಕಾಲದಲ್ಲಿಯೇ ಲೋಯರ್ ಸೆಕಂಡರಿ (7ನೇ ತರಗತಿ) ಉತ್ತೀರ್ಣರಾಗಿರುವ ದ್ರಾಕ್ಷಾಯಣಮ್ಮ ಅವರು ಇಂಗ್ಲಿಷ್ನಲ್ಲೂ ಮಾತನಾಡುತ್ತಾರೆ. ಈ ಇಳಿವಯಸ್ಸಿನಲ್ಲೂ ಸಹಿ ಮಾಡುವಾಗ ಅವರ ಕೈ ನಡುಗುವುದಿಲ್ಲ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.</p>.<p>ಅವರಿಗೆ ಮೂವರು ಗಂಡು, ಮೂವರು ಹೆಣ್ಣುಮಕ್ಕಳಿದ್ದಾರೆ. ಒಬ್ಬ ಮಗ ಬಿ.ಎಸ್. ಶಿವಕುಮಾರಸ್ವಾಮಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ. ಮತ್ತೊಬ್ಬ ಮಗ ಬಿ.ಎಸ್. ಶಿವಮೂರ್ತಿ ವಕೀಲ. ಇನ್ನೊಬ್ಬ ಮಗ ಬಿ.ಎಸ್. ವೀರಭದ್ರಪ್ಪ ಬೆಂಗಳೂರಿನ ಬಿಇಎಂಎಲ್ನಲ್ಲಿ ಉದ್ಯೋಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು: </strong>ಸಮೀಪದ ಚಿಕ್ಕಎಮ್ಮಿಗನೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 88 ವರ್ಷದ ವೃದ್ಧೆ ದ್ರಾಕ್ಷಾಯಣಮ್ಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.</p>.<p>ದ್ರಾಕ್ಷಾಯಣಮ್ಮ ಅವರು ಜಿಲ್ಲೆಯಲ್ಲೇ ಹಿರಿಯ ವಯಸ್ಸಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಇದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ ಸದಸ್ಯೆಯಾಗಿದ್ದ ಅವರಿಗೀಗ ಅಧ್ಯಕ್ಷೆ ಪಟ್ಟ.</p>.<p>ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ನಟರಾಜ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ 17 ಸದಸ್ಯರು ಮತದಾನ ಮಾಡಿದರು.</p>.<p>ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ದ್ರಾಕ್ಷಾಯಣಮ್ಮ 11 ಮತ, ಪ್ರತಿಸ್ಪರ್ಧಿ ಪದ್ಮಾವತಿ ಐದು ಮತಗಳನ್ನು ಪಡೆದರು.</p>.<p>‘ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಲು ಮಕ್ಕಳು ಹಾಗೂ ನೆರೆಹೊರೆಯವರ ಪ್ರೇರಣೆಯೇ ಕಾರಣ. ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಜನಸೇವೆ ಮಾಡಿದ್ದಾರೆ. ನಾನೂ ಜನಸೇವೆ ಮಾಡುವೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಸ್ಥಳೀಯ ಶಾಖೆಯ ಅಧಿಕಾರಿ ಬಿ.ನಾಗರಾಜ್ ಅವರ ಪ್ರೋತ್ಸಾಹ ಮರೆಯುವಂತಿಲ್ಲ’ ಎನ್ನುತ್ತಾರೆ ದ್ರಾಕ್ಷಾಯಣಮ್ಮ.</p>.<p>ಆಗಿನ ಕಾಲದಲ್ಲಿಯೇ ಲೋಯರ್ ಸೆಕಂಡರಿ (7ನೇ ತರಗತಿ) ಉತ್ತೀರ್ಣರಾಗಿರುವ ದ್ರಾಕ್ಷಾಯಣಮ್ಮ ಅವರು ಇಂಗ್ಲಿಷ್ನಲ್ಲೂ ಮಾತನಾಡುತ್ತಾರೆ. ಈ ಇಳಿವಯಸ್ಸಿನಲ್ಲೂ ಸಹಿ ಮಾಡುವಾಗ ಅವರ ಕೈ ನಡುಗುವುದಿಲ್ಲ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.</p>.<p>ಅವರಿಗೆ ಮೂವರು ಗಂಡು, ಮೂವರು ಹೆಣ್ಣುಮಕ್ಕಳಿದ್ದಾರೆ. ಒಬ್ಬ ಮಗ ಬಿ.ಎಸ್. ಶಿವಕುಮಾರಸ್ವಾಮಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ. ಮತ್ತೊಬ್ಬ ಮಗ ಬಿ.ಎಸ್. ಶಿವಮೂರ್ತಿ ವಕೀಲ. ಇನ್ನೊಬ್ಬ ಮಗ ಬಿ.ಎಸ್. ವೀರಭದ್ರಪ್ಪ ಬೆಂಗಳೂರಿನ ಬಿಇಎಂಎಲ್ನಲ್ಲಿ ಉದ್ಯೋಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>