ಪುನರಾವರ್ತಿತ ಅಭ್ಯರ್ಥಿಗಳಲ್ಲಿ ಒಂದು ಅಥವಾ ಎರಡನೇ ಬಾರಿ ಪರೀಕ್ಷೆ ಬರೆಯುವವರ ಮಾಹಿತಿ ಇಲಾಖೆಗೆ ಸುಲಭವಾಗಿ ಸಿಗಲಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪಿಯು ಇಲಾಖೆ ಡಿಜಿಟಲೀಕರಣಕ್ಕೆ ಒಳಗೊಳ್ಳುವ ಮೊದಲಿನ ಅಭ್ಯರ್ಥಿಗಳಾಗಿದ್ದರೆ, ಅವರ ಹಿಂದಿನ ಫಲಿತಾಂಶದ ಆಧಾರದಲ್ಲಿ ತೇರ್ಗಡೆ ಮಾಡುವುದು ಕಷ್ಟ. ಹೀಗಾಗಿ, ಕೃಪಾಂಕ ನೀಡಿ ತೇರ್ಗಡೆ ಮಾಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದು, ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಮೂಲಗಳು ಹೇಳಿವೆ.