ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಜನವರಿ 29ರಂದು ನಡೆಯುವ ಬೀಟಿಂಗ್ ರಿಟ್ರೀಟ್ನಿಂದ ಗಾಂಧೀಜಿ ಅವರ ನೆಚ್ಚಿನ ʼಅಬೈಡ್ ವಿತ್ ಮಿʼ ಗೀತೆಯನ್ನು ತೆಗೆದುಹಾಕಿರುವುದು ನ್ಯಾಯಯುತ ನಿರ್ಧಾರವಲ್ಲ. 2020ರಲ್ಲೂ ಇದೇ ರೀತಿ ಮಾಡಿ ಜನರ ಒತ್ತಾಯದ ನಂತರ 2021ರಲ್ಲಿ ಮತ್ತೆ ಗೀತೆಯನ್ನು ಸೇರಿಸಿದ್ದ ಕೇಂದ್ರ ಸರ್ಕಾರಕ್ಕೆ ಇನ್ನೂ ತನ್ನ ತಪ್ಪಿನ ಅರಿವಾಗಿಲ್ಲ’ ಎಂದು ಟೀಕಿಸಿದ್ದಾರೆ.