‘ದಾಳಿಗೆ ಅಧಿಕಾರಿಗಳು ಸಜ್ಜಾಗಿದ್ಧಾರೆ. ಹಣ ನೀಡಿದಿದ್ದರೆ, ದಾಳಿ ನಡೆಯಲಿದೆ ಎಂದು ಆ ವ್ಯಕ್ತಿ ಕನ್ನಡದಲ್ಲಿ ಮಾತನಾಡಿ ಬೆದರಿಕೆಯೊಡ್ಡಿದ. ಅದಕ್ಕೆ ನಾನು ಯಾರಿಗೂ ಹಣ ನೀಡುವುದಿಲ್ಲವೆಂದು ಉತ್ತರಿಸಿದೆ. ಅದಾದ ಕೆಲವೇ ನಿಮಿಷದಲ್ಲಿ ಬೇರೊಂದು ನಂಬರ್ನಿಂದ ಮತ್ತೆ ಕರೆ ಮಾಡಿದ್ದ. ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ’ ಎಂದು ಬೋಪಯ್ಯ ತಿಳಿಸಿದರು.