ಆಂಧ್ರಪ್ರದೇಶದ ವಿವಿಧೆಡೆ ಹಲವು ದಿನಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ನಡೆದಿದ್ದು, ರಥಕ್ಕೆ ಬೆಂಕಿ ಇಟ್ಟಿದ್ದು, ವಿಗ್ರಹಗಳ ಧ್ವಂಸದ ಪ್ರಕರಣಗಳು ನಡೆದಿದ್ದವು. ಅಂತಹ ಸ್ಥಳಗಳಿಗೆ ಕಳೆದ ವಾರ ಭೇಟಿ ನೀಡಿದ್ದ ಸ್ವಾಮೀಜಿ, ದಾಳಿ ನಿಯಂತ್ರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಈ ಕಾರಣದಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸೂಚನೆಯ ಮೇರೆಗೆ ಧಾರ್ಮಿಕ ದತ್ತಿ ಸಚಿವರು ಸ್ವಾಮೀಜಿಯನ್ನು ಭೇಟಿಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.