‘ಆರೋಗ್ಯ ಇಲಾಖೆಯು ಕೊರೊನಾ ಯೋಧರಿಗೆ ನೀಡುವಂತೆ ಆಶಾ ಕಾರ್ಯಕರ್ತೆಯರಿಗೆ ಕೂಡ ವಿಶೇಷ ಪ್ರೋತ್ಸಾಹಧನ ತಿಂಗಳಿಗೆ ₹ 5 ಸಾವಿರ ನೀಡಬೇಕು. ಸೋಂಕಿತರಾದ ಕಾರ್ಯಕರ್ತರಿಗೆ ಕನಿಷ್ಠ ₹ 25 ಸಾವಿರ ಪರಿಹಾರ ಒದಗಿಸಬೇಕು. ಅಗತ್ಯವಿರುವಷ್ಟು ಮುಖಗವಸು, ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸರ್), ಕೈಗವಸುಗಳನ್ನು ನೀಡುವ ಮೂಲಕ ಮುಂಚೂಣಿ ಯೋಧರನ್ನು ರಕ್ಷಿಸಬೇಕು. ಬಾಕಿ ಇರುವ ಮೂರು ತಿಂಗಳ ಮಾಸಿಕ ಗೌರವಧನ ₹ 4 ಸಾವಿರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮೊದಲ ಅಲೆಯಲ್ಲಿ ಮೃತಪಟ್ಟ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ತಲಾ ₹ 50 ಲಕ್ಷ ಪರಿಹಾರ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ.