ಬೆಳಿಗ್ಗೆ 11ರ ಸುಮಾರಿಗೆ ಕಳಲೆ ಗ್ರಾಮ ತಲುಪಿದತು. ಯಾತ್ರಿಗಳು, ಕಳಲೆ ಗೇಟ್ ಬಳಿ ತಾತ್ಕಾಲಿಕ ಟೆಂಟ್ನಲ್ಲಿ ವಿಶ್ರಾಂತಿ ಪಡೆದರು. ಸಂಜೆ 4.30ರ ಸುಮಾರಿಗೆ ಕಳಲೆ ಗೇಟ್ನಿಂದ ಪಾದಯಾತ್ರೆ ಆರಂಭಗೊಂಡಿತು. ಸಂಜೆ 5ಕ್ಕೆ ನಂಜನಗೂಡಿನ ಹುಲ್ಲಹಳ್ಳಿ ವೃತ್ತಕ್ಕೆ ಆಗಮಿಸಿದಾಗಲೂ ಅದ್ದೂರಿ ಸ್ವಾಗತ ಸಿಕ್ಕಿತು. ಸಂಜೆ 6.30ಕ್ಕೆ ಚಿಕ್ಕಯ್ಯನಛತ್ರದಲ್ಲಿ ಕಾರ್ನರ್ ಮೀಟಿಂಗ್ ಜೊತೆ ಪಾದಯಾತ್ರೆ ಮುಕ್ತಾಯಗೊಂಡಿತು. ತಾಂಡವಪುರದ ಎಂ.ಐ.ಟಿ. ಕಾಲೇಜಿನ ಎದುರಿನ ಟೆಂಟ್ನಲ್ಲಿ ವಾಸ್ತವ್ಯ ಹೂಡಿರುವ ರಾಹುಲ್, ಅ.2ರಂದು ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಮೈಸೂರಿನತ್ತ ಪಾದಯಾತ್ರೆ ಮುಂದುವರಿಸಲಿದ್ದಾರೆ.