ಜಗಳೂರು ಮತ್ತು ಹರಿಹರದಲ್ಲಿ ಬುಧವಾರ ನಡೆದ ಬಿಜೆಪಿಯ ‘ಜನ ಸಂಕಲ್ಪ ಯಾತ್ರೆ’ಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕಾಂಗ್ರೆಸ್ನವರು ತಾವೊಬ್ಬರೇ ಎಸ್ಸಿ, ಎಸ್ಟಿ ಸಮುದಾಯದ ರಕ್ಷಣೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಎಂದು ಎಸ್ಸಿ, ಎಸ್ಟಿ ಸಮುದಾಯ 50 ವರ್ಷಗಳಿಂದ ಹೋರಾಟ ನಡೆಸಿದ್ದರೂ ಸ್ಪಂದಿಸಿರಲಿಲ್ಲ. ಕಾಂಗ್ರೆಸ್ನವರಿಗೆ ಈ ಸಮುದಾಯದವರು ವಿದ್ಯಾವಂತರಾಗಿ ಉದ್ಯೋಗ ಪಡೆಯುವುದು ಬೇಕಾಗಿರಲಿಲ್ಲ. ಅವರು ಜಾಗೃತರಾದರೆ ತಮಗೆ ವೋಟ್ ಹಾಕುವುದಿಲ್ಲ ಎಂಬುದು ಕಾಂಗ್ರೆಸ್ನವರಿಗೆ ತಿಳಿದಿದ್ದರಿಂದ ಅವರನ್ನು ಬಾವಿಯೊಳಗೇ ಇಟ್ಟಿದ್ದರು’ ಎಂದು ದೂರಿದರು.