ಒಕ್ಕಲಿಗರಿಗೆ 2 ‘ಸಿ’, ಪಂಚಮಸಾಲಿಗೆ 2 ‘ಡಿ’ ಕೊಡಲು ಸಂಪುಟ ತೀರ್ಮಾನಿಸಿದೆ. ಈಗಿರುವ ಮೀಸಲಾತಿಗೆ ಇನ್ನಷ್ಟು ಪರ್ಸೆಂಟೇಜ್ ಸೇರಿಸಬೇಕು ಎಂದು ಚರ್ಚೆ ಆಗುತ್ತಿದೆ. ಮೀಸಲಾತಿ ವಿಚಾರದಲ್ಲಿ ಇದು ಸರ್ಕಾರದ ಮೊದಲ ಹೆಜ್ಜೆ. ಹಿಂದುಳಿದ ಜಾತಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಪಂಚಮಸಾಲಿ ಮತ್ತು ಒಕ್ಕಲಿಗರಿಗೂ ನ್ಯಾಯ ಸಿಗಬೇಕು. ಸರ್ಕಾರದ ಮೊದಲ ಹೆಜ್ಜೆ ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಏಕೆ ಸ್ವಾಗತ ಮಾಡುತ್ತಿಲ್ಲವೋ ಗೊತ್ತಿಲ್ಲ. ಪಂಚಮಸಾಲಿ ಸಮುದಾಯ ಕೂಡ ವಿರೋಧ ಮಾಡಿಲ್ಲ. ಸಂಭ್ರಮವೂ ಪಟ್ಟಿಲ್ಲ. ಮೀಸಲಾತಿ ಅಂತಿಮಗೊಂಡ ಬಳಿಕ ಅವರು ಸಂತೃಪ್ತಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಮೀಸಲಾತಿ ನೀಡಲು ಜೆಡಿಎಸ್–ಕಾಂಗ್ರೆಸ್ ಕೂಡ ನಮಗೆ ಸಹಕಾರ ನೀಡಬೇಕು. ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರೂ ಸರ್ಕಾರಕ್ಕೆ ಸಲಹೆ ನೀಡಬೇಕು’ ಎಂದರು.