<p><strong>ಬೆಂಗಳೂರು: </strong>ನಾಯಕತ್ವ ಬದಲಾವಣೆ, ಸರ್ಕಾರದ ಕಾರ್ಯವೈಖರಿ ಬಗ್ಗೆ ಶಾಸಕರ ಅಸಮಾಧಾನ ಆಲಿಸಲು ಬೆಂಗಳೂರಿಗೆ ಬುಧವಾರ ಬಂದಿರುವ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಎದುರು ದೂರು–ಪ್ರತಿದೂರು ಸಲ್ಲಿಸಿ, ತಮಗಿರುವ ಆಕ್ರೋಶ ಹೊರಹಾಕಲು ಆ ಪಕ್ಷದ ಇಬ್ಬಣಗಳ ಶಾಸಕರು ಸಜ್ಜಾಗಿದ್ದಾರೆ. ಇದರಿಂದಾಗಿ ಅಹವಾಲುಗಳ ಸುರಿಮಳೆಯನ್ನೇ ಎದುರಿಸುವ ಸವಾಲು ಉಸ್ತುವಾರಿಗೆ ಎದುರಾಗಿದೆ.</p>.<p>ಯಡಿಯೂರಪ್ಪ ಪರ ಮತ್ತು ವಿರೋಧಿ ಬಣಗಳು ಈಗಾಗಲೇ ತಾವು ಹೇಳಬೇಕಾಗಿರುವ ಅಂಶಗಳ ದೂರು– ಪ್ರತಿ ದೂರುಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ಅದನ್ನು ಗುರುವಾರ(ಜೂ.17) ಅರುಣ್ಸಿಂಗ್ಗೆ ಒಪ್ಪಿಸಲಿದ್ದಾರೆ. ಎಲ್ಲ ಶಾಸಕರ ಅಹವಾಲುಗಳನ್ನು ಕೇಳುವುದಾಗಿಯೂ ಸಿಂಗ್ ಸ್ಪಷ್ಟಪಡಿಸಿದ್ದಾರೆ.</p>.<p>‘ನಾಯಕತ್ವ ಬದಲಾವಣೆಗಾಗಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದು ನಿಜ’ ಎಂದು ಸಚಿವ ಈಶ್ವರಪ್ಪ ಹೇಳಿರುವುದು ಚರ್ಚೆಗೆ ಒಳಗಾದ ಬೆನ್ನಲ್ಲೇ, ‘ನಾಯಕತ್ವದ ಬಗ್ಗೆ ಚರ್ಚೆಗೆ ಇಲ್ಲಿಗೆ ಬಂದಿಲ್ಲ’ ಎಂದೂ ಅರುಣ್ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಗುರುವಾರದ ಸಭೆಯಲ್ಲಿ ಇವೆಲ್ಲವೂ ಪ್ರಸ್ತಾಪವಾಗುವ ಸಾಧ್ಯತೆ ಇದೆ.</p>.<p>ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಜರಿದ್ದ ಕಾರಣ, ಯಾವುದೇ ಸಚಿವರು ಮುಕ್ತ<br />ವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ತಾವು ಹೇಳಬೇಕಾಗಿರುವ ಅಂಶ<br />ಗಳನ್ನು ಹೇಳಿದಅರುಣ್ಸಿಂಗ್, ಬೇಗನೆ ಸಭೆ ಮುಗಿಸಿದರು ಎಂದು ಮೂಲಗಳು ಹೇಳಿವೆ.</p>.<p>ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ ಮುಂತಾದವರು ತಮ್ಮ ಇಲಾಖೆಯ ಸಾಧನೆಗಳ<br />ಬಗ್ಗೆ ಚುಟುಕಾಗಿ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.</p>.<p>ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಮುಖ್ಯಮಂತ್ರಿ ಪರ ಮತ್ತು ವಿರೋಧಿ ಬಣಗಳು ಗೋಪ್ಯವಾಗಿ ಸಭೆಗಳನ್ನು ನಡೆಸಿದ್ದು, ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಏನೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.</p>.<p>ಅನ್ಯ ಪಕ್ಷದಿಂದ ಬಿಜೆಪಿಗೆ ವಲಸೆ ಬಂದು ಸಚಿವರಾದವರು ಕೃಷಿ ಸಚಿವ ಬಿ.ಸಿ.ಪಾಟೀಲ ಮನೆಯಲ್ಲಿ ಬುಧವಾರ ಸಭೆ ಸೇರಿ ತಮ್ಮ ಹಿತ ಕಾಯಲು ಏನು ಯಾವೆಲ್ಲ ವಿಷಯವನ್ನು ಮುಂದಿಡಬೇಕು ಎಂಬ ಚರ್ಚೆಯನ್ನೂ ಮತ್ತೊಂದೆಡೆ ನಡೆಸಿದರು. ಈ ಸಭೆಯಲ್ಲಿ ಡಾ.ಕೆ.ಸುಧಾಕರ್, ಆನಂದಸಿಂಗ್, ಕೆ.ಗೋಪಾಲಯ್ಯ, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್ ಮುಂತಾದವರು ಇದ್ದರು.</p>.<p>ಶಾಸಕರ ಜತೆ ಚರ್ಚಿಸುವೆ: ಸಚಿವರ ಸಭೆಯ ಬಳಿಕ ಮಾತನಾಡಿದ ಅರುಣ್ಸಿಂಗ್ ಅವರು, ’ನನ್ನನ್ನು ಭೇಟಿ ಮಾಡಲು ಬಯಸುವ ಎಲ್ಲ ಶಾಸಕರನ್ನೂ ಭೇಟಿ ಮಾಡುತ್ತೇನೆ. ಅವರ ದೂರು–ದುಮ್ಮಾನಗಳನ್ನು ಕೇಳುತ್ತೇನೆ. ಅವರ ಕ್ಷೇತ್ರಗಳಲ್ಲಿ ಜನಪರವಾದ ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ, ಮಾಹಿತಿ ನೀಡಿ ಎಂದು ಕೇಳುತ್ತೇನೆ‘ ಎಂದರು.</p>.<p>‘ಶಾಸಕರು ಹೇಳಬೇಕಾಗಿರುವುದನ್ನೆಲ್ಲ ನನ್ನ ಬಳಿ ಹೇಳಿಕೊಳ್ಳಬಹುದು. ಆದರೆ, ಮಾಧ್ಯಮಗಳ ಮುಂದೆ ಮಾತನಾಡಿದರೆ, ಅದರಿಂದ ಪಕ್ಷಕ್ಕೆ ನಷ್ಟ ಆಗುತ್ತದೆ ಎಂಬುದನ್ನು ಶಾಸಕರು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಮಾತಿನಿಂದ ಪಕ್ಷಕ್ಕೆ ಲಾಭ ಆಗುತ್ತದೆಯೋ ನಷ್ಟ ಆಗುತ್ತದೆಯೋ ಎಂಬುದನ್ನು ಯೋಚಿಸಬೇಕು‘ ಎಂದು ಅವರು ಸೂಚ್ಯವಾಗಿ ಹೇಳಿದರು.</p>.<p><strong>ಸಚಿವರಿಗೆ ಸಿಂಗ್ ಸೂಚನೆ:</strong></p>.<p>* ಪ್ರತಿ ಗುರುವಾರ ಶಾಸಕರು ಮತ್ತು ಕಾರ್ಯಕರ್ತರಿಗೆ ಮುಕ್ತ ಭೇಟಿಗೆ ಸಚಿವರು ಅವಕಾಶ ನೀಡಬೇಕು.</p>.<p>* ಸಚಿವರು ಎಲ್ಲ ಜಿಲ್ಲೆಗಳಲ್ಲಿರುವ ಪಕ್ಷದ ನಾಯಕರ ಜತೆ ಸಂಪರ್ಕ ಇಟ್ಟುಕೊಂಡು ಮಾತುಕತೆ ನಡೆಸಬೇಕು.</p>.<p>* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಈಗ ಪ್ರಚಾರದ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ.* ಯಾವುದೇ ಸಚಿವರಾಗಲಿ, ನಾಯಕರಾಗಲಿ ಪಕ್ಷದ ವಿರುದ್ಧ ಮಾತನಾಡಬಾರದು. ಇದರಿಂದ ಪಕ್ಷದ ಹಿತಕ್ಕೆ ಧಕ್ಕೆಯಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಾಯಕತ್ವ ಬದಲಾವಣೆ, ಸರ್ಕಾರದ ಕಾರ್ಯವೈಖರಿ ಬಗ್ಗೆ ಶಾಸಕರ ಅಸಮಾಧಾನ ಆಲಿಸಲು ಬೆಂಗಳೂರಿಗೆ ಬುಧವಾರ ಬಂದಿರುವ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಎದುರು ದೂರು–ಪ್ರತಿದೂರು ಸಲ್ಲಿಸಿ, ತಮಗಿರುವ ಆಕ್ರೋಶ ಹೊರಹಾಕಲು ಆ ಪಕ್ಷದ ಇಬ್ಬಣಗಳ ಶಾಸಕರು ಸಜ್ಜಾಗಿದ್ದಾರೆ. ಇದರಿಂದಾಗಿ ಅಹವಾಲುಗಳ ಸುರಿಮಳೆಯನ್ನೇ ಎದುರಿಸುವ ಸವಾಲು ಉಸ್ತುವಾರಿಗೆ ಎದುರಾಗಿದೆ.</p>.<p>ಯಡಿಯೂರಪ್ಪ ಪರ ಮತ್ತು ವಿರೋಧಿ ಬಣಗಳು ಈಗಾಗಲೇ ತಾವು ಹೇಳಬೇಕಾಗಿರುವ ಅಂಶಗಳ ದೂರು– ಪ್ರತಿ ದೂರುಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ಅದನ್ನು ಗುರುವಾರ(ಜೂ.17) ಅರುಣ್ಸಿಂಗ್ಗೆ ಒಪ್ಪಿಸಲಿದ್ದಾರೆ. ಎಲ್ಲ ಶಾಸಕರ ಅಹವಾಲುಗಳನ್ನು ಕೇಳುವುದಾಗಿಯೂ ಸಿಂಗ್ ಸ್ಪಷ್ಟಪಡಿಸಿದ್ದಾರೆ.</p>.<p>‘ನಾಯಕತ್ವ ಬದಲಾವಣೆಗಾಗಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದು ನಿಜ’ ಎಂದು ಸಚಿವ ಈಶ್ವರಪ್ಪ ಹೇಳಿರುವುದು ಚರ್ಚೆಗೆ ಒಳಗಾದ ಬೆನ್ನಲ್ಲೇ, ‘ನಾಯಕತ್ವದ ಬಗ್ಗೆ ಚರ್ಚೆಗೆ ಇಲ್ಲಿಗೆ ಬಂದಿಲ್ಲ’ ಎಂದೂ ಅರುಣ್ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಗುರುವಾರದ ಸಭೆಯಲ್ಲಿ ಇವೆಲ್ಲವೂ ಪ್ರಸ್ತಾಪವಾಗುವ ಸಾಧ್ಯತೆ ಇದೆ.</p>.<p>ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಜರಿದ್ದ ಕಾರಣ, ಯಾವುದೇ ಸಚಿವರು ಮುಕ್ತ<br />ವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ತಾವು ಹೇಳಬೇಕಾಗಿರುವ ಅಂಶ<br />ಗಳನ್ನು ಹೇಳಿದಅರುಣ್ಸಿಂಗ್, ಬೇಗನೆ ಸಭೆ ಮುಗಿಸಿದರು ಎಂದು ಮೂಲಗಳು ಹೇಳಿವೆ.</p>.<p>ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ ಮುಂತಾದವರು ತಮ್ಮ ಇಲಾಖೆಯ ಸಾಧನೆಗಳ<br />ಬಗ್ಗೆ ಚುಟುಕಾಗಿ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.</p>.<p>ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಮುಖ್ಯಮಂತ್ರಿ ಪರ ಮತ್ತು ವಿರೋಧಿ ಬಣಗಳು ಗೋಪ್ಯವಾಗಿ ಸಭೆಗಳನ್ನು ನಡೆಸಿದ್ದು, ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಏನೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.</p>.<p>ಅನ್ಯ ಪಕ್ಷದಿಂದ ಬಿಜೆಪಿಗೆ ವಲಸೆ ಬಂದು ಸಚಿವರಾದವರು ಕೃಷಿ ಸಚಿವ ಬಿ.ಸಿ.ಪಾಟೀಲ ಮನೆಯಲ್ಲಿ ಬುಧವಾರ ಸಭೆ ಸೇರಿ ತಮ್ಮ ಹಿತ ಕಾಯಲು ಏನು ಯಾವೆಲ್ಲ ವಿಷಯವನ್ನು ಮುಂದಿಡಬೇಕು ಎಂಬ ಚರ್ಚೆಯನ್ನೂ ಮತ್ತೊಂದೆಡೆ ನಡೆಸಿದರು. ಈ ಸಭೆಯಲ್ಲಿ ಡಾ.ಕೆ.ಸುಧಾಕರ್, ಆನಂದಸಿಂಗ್, ಕೆ.ಗೋಪಾಲಯ್ಯ, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್ ಮುಂತಾದವರು ಇದ್ದರು.</p>.<p>ಶಾಸಕರ ಜತೆ ಚರ್ಚಿಸುವೆ: ಸಚಿವರ ಸಭೆಯ ಬಳಿಕ ಮಾತನಾಡಿದ ಅರುಣ್ಸಿಂಗ್ ಅವರು, ’ನನ್ನನ್ನು ಭೇಟಿ ಮಾಡಲು ಬಯಸುವ ಎಲ್ಲ ಶಾಸಕರನ್ನೂ ಭೇಟಿ ಮಾಡುತ್ತೇನೆ. ಅವರ ದೂರು–ದುಮ್ಮಾನಗಳನ್ನು ಕೇಳುತ್ತೇನೆ. ಅವರ ಕ್ಷೇತ್ರಗಳಲ್ಲಿ ಜನಪರವಾದ ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ, ಮಾಹಿತಿ ನೀಡಿ ಎಂದು ಕೇಳುತ್ತೇನೆ‘ ಎಂದರು.</p>.<p>‘ಶಾಸಕರು ಹೇಳಬೇಕಾಗಿರುವುದನ್ನೆಲ್ಲ ನನ್ನ ಬಳಿ ಹೇಳಿಕೊಳ್ಳಬಹುದು. ಆದರೆ, ಮಾಧ್ಯಮಗಳ ಮುಂದೆ ಮಾತನಾಡಿದರೆ, ಅದರಿಂದ ಪಕ್ಷಕ್ಕೆ ನಷ್ಟ ಆಗುತ್ತದೆ ಎಂಬುದನ್ನು ಶಾಸಕರು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಮಾತಿನಿಂದ ಪಕ್ಷಕ್ಕೆ ಲಾಭ ಆಗುತ್ತದೆಯೋ ನಷ್ಟ ಆಗುತ್ತದೆಯೋ ಎಂಬುದನ್ನು ಯೋಚಿಸಬೇಕು‘ ಎಂದು ಅವರು ಸೂಚ್ಯವಾಗಿ ಹೇಳಿದರು.</p>.<p><strong>ಸಚಿವರಿಗೆ ಸಿಂಗ್ ಸೂಚನೆ:</strong></p>.<p>* ಪ್ರತಿ ಗುರುವಾರ ಶಾಸಕರು ಮತ್ತು ಕಾರ್ಯಕರ್ತರಿಗೆ ಮುಕ್ತ ಭೇಟಿಗೆ ಸಚಿವರು ಅವಕಾಶ ನೀಡಬೇಕು.</p>.<p>* ಸಚಿವರು ಎಲ್ಲ ಜಿಲ್ಲೆಗಳಲ್ಲಿರುವ ಪಕ್ಷದ ನಾಯಕರ ಜತೆ ಸಂಪರ್ಕ ಇಟ್ಟುಕೊಂಡು ಮಾತುಕತೆ ನಡೆಸಬೇಕು.</p>.<p>* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಈಗ ಪ್ರಚಾರದ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ.* ಯಾವುದೇ ಸಚಿವರಾಗಲಿ, ನಾಯಕರಾಗಲಿ ಪಕ್ಷದ ವಿರುದ್ಧ ಮಾತನಾಡಬಾರದು. ಇದರಿಂದ ಪಕ್ಷದ ಹಿತಕ್ಕೆ ಧಕ್ಕೆಯಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>