ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಗುರುವಾರ ತೀರ್ಮಾನ ಪ್ರಕಟಿಸಿದ ಧಾರವಾಡದ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಸುಬ್ರಮಣ್ಯ, ‘ಲಂಚ ಪ್ರಕರಣದಲ್ಲಿ ಅಭಿಷೇಕ್ ತ್ರಿಪಾಠಿ ಮತ್ತು ಅಲೋಕ್ ತಿವಾರಿ ವಿರುದ್ಧದ ಆರೋಪಗಳು ಸಾಬೀತಾಗಿವೆ’ ಎಂದರು. ವಾಹನ ಚಾಲಕ ಸುನಿಲ್ ಜಾಧವ್ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದರು.