ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಾರ್ಯವೈಖರಿಯನ್ನು ಮುಕ್ತ ನ್ಯಾಯಾಲಯದಲ್ಲಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಟೀಕೆ–ಟಿಪ್ಪಣಿ ಎಷ್ಟರ ಮಟ್ಟಿಗೆ ಸೂಕ್ತ ಮತ್ತು ಇಂತಹ ಹೇಳಿಕೆಗಳಿಂದ ಅವರು ಏನನ್ನು ಸಾಧಿಸಲು ಬಯಸಿದ್ದಾರೆ’ ಎಂದು ಮಾಜಿ ಅಡ್ವೊಕೇಟ್ ಜನರಲ್ ಆದ ಹಿರಿಯ ವಕೀಲ ಬಿ.ವಿ.ಆಚಾರ್ಯಪ್ರಶ್ನಿಸಿದ್ದಾರೆ.
ಸಂದೇಶ್ ಅವರನ್ನು ಬೆಂಬಲಿಸಿ ಬೆಂಗಳೂರು ವಕೀಲರ ಸಂಘವು ಪ್ರಕಟಣೆ ಹೊರಡಿಸಿದ್ದಕ್ಕೆ ಪ್ರತಿಯಾಗಿ, ‘ದಕ್ಷ ಲೀಗಲ್’ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಆಚಾರ್ಯ, ‘ಸಿಜೆಐಗೆ ಪತ್ರ ಬರೆಯುವ ಮುನ್ನ ಸಂಘವು ಕೆಲವು ಸಂಗತಿಗಳನ್ನು ಮನವರಿಕೆಮಾಡಿಕೊಳ್ಳಿ’ ಎಂದು ಸಂಘಕ್ಕೆ ಅವರು ಸೂಚಿಸಿದ್ದಾರೆ.