ಗುಜರಾತ್ ಮೂಲದ ಕೆಲವು ಉದ್ಯಮಿಗಳು ಹಾಗೂ ಪಕ್ಷದ ಪ್ರಮುಖರ ನೆರವಿನೊಂದಿಗೆ ವರಿಷ್ಠರ ಮನವೊಲಿಸುವ ಅವರ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಆದರೆ, ಒಂದೊಮ್ಮೆ ಯಡಿಯೂರಪ್ಪ ಅವರ ರಾಜೀನಾಮೆ ಪಡೆದಲ್ಲಿ, ಹೊಸಬರ ನೇತೃತ್ವದಲ್ಲಿನ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವಂತೆಯೂ ವಿಜಯೇಂದ್ರ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ, ವರಿಷ್ಠರಿಂದ ‘ನೋಡೋಣ’ ಎಂಬ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ.