ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿ, ‘ಜೆಡಿಎಸ್ ಶಾಸಕರು ಮಾತ್ರ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಬೇಕು ಎನ್ನುವುದು ಆತ್ಮಸಾಕ್ಷಿಯಾ? ಅಡ್ಡ ಮತದಾನ ಮಾಡಿದವರನ್ನು ಸದಸ್ಯತ್ವದಿಂದಲೇ ತೆಗೆಸಿ ಪಕ್ಷದಿಂದ ಹೊರ ಹಾಕಿದ ಅವರಿಗೆ ನಾಚಿಕೆ ಆಗುವುದಿಲ್ಲವೇ? ಆತ್ಮಸಾಕ್ಷಿಯಿಂದ ಅಡ್ಡ ಮತದಾನ ಮಾಡಿ ಎನ್ನುವ ಅವರಿಗೆ ಆತ್ಮವೂ ಇಲ್ಲ; ಸಾಕ್ಷಿಯೂ ಇಲ್ಲ’ ಎಂದು ಟೀಕಿಸಿದರು.