ಸ್ವಾಮೀಜಿಯ ಪಾರ್ಥಿವ ಶರೀರವನ್ನು ಚಿತೆಯಲ್ಲಿ ಕುಳ್ಳಿರಿಸಿ, ಶಾಂತಿಧಾರ ಪಠಿಸಲಾಯಿತು. ನಂತರ ಗಂಧ, ಅರಿಷಿಣ, ಚಂದನ, ಕಷಾಯ, ಕ್ಷೀರ, ತುಪ್ಪ, ಎಳನೀರು, ವಿವಿಧ ಜಲಗಳಿಂದ ಅಭಿಷೇಕ ಮಾಡಲಾಯಿತು. ಗಂಧದ ಕಟ್ಟಿಗೆಯಿಂದ ತಯಾರಿಸಿದ ಚಿತೆಯಲ್ಲಿ ಕೊಬ್ಬರಿ, ತುಪ್ಪ ಹಾಕಲಾಯಿತು. ನಂತರ ಮಠದ ಉತ್ತರಾಧಿಕಾರಿ ಆಗಮ ಕೀರ್ತಿಯವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.