‘ಗ್ಯಾಸ್ ಕನೆಕ್ಷನ್ ಕೊಡಿಸಿದ ಎರಡು ದಿನಕ್ಕೆ ನನಗೆ ಕರೆ ಮಾಡಿದ್ದ ಅಮ್ಮ, ನೀನು ಕೊಡಿಸಿದ ಗ್ಯಾಸ್ ಸಿಲಿಂಡರ್ನಿಂದಲೇ ಅಡುಗೆ ಮಾಡಿದ್ದೀನಿ. ತಪ್ಪದೆ ಊಟಕ್ಕೆ ಬಾ ಎಂದು ಕರೆದಿದ್ದರು. ಅವರಿಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಇತ್ತು. ರಾಘಣ್ಣ ಹುಬ್ಬಳ್ಳಿಗೆ ಬರ್ತಾನೆ. ಅಲ್ಲಿರುವ ನಮ್ಮ ಕಚೇರಿಯನ್ನು ಆತನೇ ನೋಡಿಕೊಳ್ಳುವುದು. ಆತನ ಬಗ್ಗೆ ಸ್ಪಲ್ಪ ಕಾಳಜಿ ವಹಿಸು ಎಂದು ಹೇಳುತ್ತಿದ್ದರು. ರಾಘಣ್ಣ ನನ್ನ ಅತ್ಯಂತ ಆತ್ಮೀಯ ಸ್ನೇಹಿತ. ಚಿಕ್ಕಂದಿನಿಂದಲೂ ನನಗೆ ಪರಿಚಿತರು. ಅಪ್ಪು (ಪುನೀತ್ ರಾಜ್ಕುಮಾರ್) ಹಾಗೂ ಶಿವಣ್ಣ ಅವರ ಜೊತೆಯೂ ಆತ್ಮೀಯ ಒಡನಾಟ ಹೊಂದಿದ್ದೇನೆ’ ಎಂದರು.