<p id="thickbox_headline"><strong>ಬೆಂಗಳೂರು: </strong>‘ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠಕನಕದಾಸರಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಖಿತ ಸೂಚನೆ ನೀಡಿದ್ದಾರೆ.</p>.<p>ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯುಕನಕದಾಸರಜೀವನಚರಿತ್ರೆಮತ್ತು ವಿವರಗಳನ್ನು ಕಡೆಗಣಿಸಿದೆ ಎಂದು ಸ್ವಾಮೀಜಿ ಹೇಳಿದರು.</p>.<p>ಒಂಬತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ಒಂದು ಪುಟದಷ್ಟಿದ್ದಕನಕದಾಸರಜೀವನ ವಿವರಗಳನ್ನೊಳಗೊಂಡ ಪಠ್ಯ ಭಾಗವನ್ನು ಒಂದೇ ಸಾಲಿಗೆ ತಂದು ಕಡಿತಗೊಳಿಸುವ ಮೂಲಕಕನಕದಾಸರಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆದಿದೆ ಎಂದು ಅವರು ಆಕ್ಷೇಪಿಸಿದರು.</p>.<p>ಇದು ಹಿಂದುಳಿದ ಸಮುದಾಯಗಳನ್ನು ಒಳಗೊಂಡಂತೆ ಈ ನೆಲದ ನಾಡು– ನುಡಿಗೆ ಮಾಡಿದ ದ್ರೋಹವಾಗಿದೆ. ಚಾರಿತ್ರಿಕ ಮತ್ತು ಸಾಂಸ್ಕೃತಿಕ ದ್ರೋಹವಾಗಿದೆ. ತಾವು ಮಧ್ಯ ಪ್ರವೇಶಿಸಿಕನಕದಾಸರಜೀವನ ವಿವರಗಳನ್ನು ಹಿಂದಿನಂತೇ ಅಳವಡಿಸಬೇಕು ಎಂದು ಮನವಿ ಮಾಡಿದರು.</p>.<p><a href="https://www.prajavani.net/karnataka-news/karnataka-government-reshuffle-text-books-who-made-mistakes-rohith-chakratirtha-949555.html" itemprop="url">ಚಕ್ರತೀರ್ಥ ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯಗಳ ಮರು ಪರಿಷ್ಕರಣೆಗೆ ನಿರ್ಧಾರ </a></p>.<p><strong>ಕೆಂಪೇಗೌಡರಿಗೆ ಒಂದೇ ಪುಟ!</strong></p>.<p>‘ನಾಡಪ್ರಭು ಕೆಂಪೇಗೌಡರ ಬಗ್ಗೆ ಹಿಂದಿನ ಸಮಾಜ ವಿಜ್ಞಾನ ಪಠ್ಯದಲ್ಲಿ ಏನು ಇರಲಿಲ್ಲ ಎಂದು ಸಚಿವರು ಹೇಳಿದ್ದು ಸತ್ಯವಲ್ಲ. ಬರಗೂರರ ಪಠ್ಯದಲ್ಲಿ ಎರಡು ಪುಟಗಳಷ್ಟಿದ್ದ ಕೆಂಪೇಗೌಡರ ವಿಷಯವನ್ನು ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಲಾಗಿದೆ. ದಾಸ ಕೂಟದವರು ಅದರಲ್ಲೂ ವಿಶೇಷವಾಗಿ ಕನಕದಾಸರಂಥಹವರು ಜಾತಿ ತಾರತಮ್ಯ ವಿರೋಧಿಸಿದ್ದನ್ನು ಪರಿಷ್ಕರಣೆಯಲ್ಲಿ ಬಿಡಲಾಗಿರುವುದು ಸರಿಯಾದ ಕ್ರಮವಲ್ಲ’ ಎಂದು ಮಠಾಧೀಶರ ಒಕ್ಕೂಟ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಬೆಂಗಳೂರು: </strong>‘ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠಕನಕದಾಸರಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಖಿತ ಸೂಚನೆ ನೀಡಿದ್ದಾರೆ.</p>.<p>ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯುಕನಕದಾಸರಜೀವನಚರಿತ್ರೆಮತ್ತು ವಿವರಗಳನ್ನು ಕಡೆಗಣಿಸಿದೆ ಎಂದು ಸ್ವಾಮೀಜಿ ಹೇಳಿದರು.</p>.<p>ಒಂಬತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ಒಂದು ಪುಟದಷ್ಟಿದ್ದಕನಕದಾಸರಜೀವನ ವಿವರಗಳನ್ನೊಳಗೊಂಡ ಪಠ್ಯ ಭಾಗವನ್ನು ಒಂದೇ ಸಾಲಿಗೆ ತಂದು ಕಡಿತಗೊಳಿಸುವ ಮೂಲಕಕನಕದಾಸರಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆದಿದೆ ಎಂದು ಅವರು ಆಕ್ಷೇಪಿಸಿದರು.</p>.<p>ಇದು ಹಿಂದುಳಿದ ಸಮುದಾಯಗಳನ್ನು ಒಳಗೊಂಡಂತೆ ಈ ನೆಲದ ನಾಡು– ನುಡಿಗೆ ಮಾಡಿದ ದ್ರೋಹವಾಗಿದೆ. ಚಾರಿತ್ರಿಕ ಮತ್ತು ಸಾಂಸ್ಕೃತಿಕ ದ್ರೋಹವಾಗಿದೆ. ತಾವು ಮಧ್ಯ ಪ್ರವೇಶಿಸಿಕನಕದಾಸರಜೀವನ ವಿವರಗಳನ್ನು ಹಿಂದಿನಂತೇ ಅಳವಡಿಸಬೇಕು ಎಂದು ಮನವಿ ಮಾಡಿದರು.</p>.<p><a href="https://www.prajavani.net/karnataka-news/karnataka-government-reshuffle-text-books-who-made-mistakes-rohith-chakratirtha-949555.html" itemprop="url">ಚಕ್ರತೀರ್ಥ ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯಗಳ ಮರು ಪರಿಷ್ಕರಣೆಗೆ ನಿರ್ಧಾರ </a></p>.<p><strong>ಕೆಂಪೇಗೌಡರಿಗೆ ಒಂದೇ ಪುಟ!</strong></p>.<p>‘ನಾಡಪ್ರಭು ಕೆಂಪೇಗೌಡರ ಬಗ್ಗೆ ಹಿಂದಿನ ಸಮಾಜ ವಿಜ್ಞಾನ ಪಠ್ಯದಲ್ಲಿ ಏನು ಇರಲಿಲ್ಲ ಎಂದು ಸಚಿವರು ಹೇಳಿದ್ದು ಸತ್ಯವಲ್ಲ. ಬರಗೂರರ ಪಠ್ಯದಲ್ಲಿ ಎರಡು ಪುಟಗಳಷ್ಟಿದ್ದ ಕೆಂಪೇಗೌಡರ ವಿಷಯವನ್ನು ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಲಾಗಿದೆ. ದಾಸ ಕೂಟದವರು ಅದರಲ್ಲೂ ವಿಶೇಷವಾಗಿ ಕನಕದಾಸರಂಥಹವರು ಜಾತಿ ತಾರತಮ್ಯ ವಿರೋಧಿಸಿದ್ದನ್ನು ಪರಿಷ್ಕರಣೆಯಲ್ಲಿ ಬಿಡಲಾಗಿರುವುದು ಸರಿಯಾದ ಕ್ರಮವಲ್ಲ’ ಎಂದು ಮಠಾಧೀಶರ ಒಕ್ಕೂಟ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>