‘ನಾಡಪ್ರಭು ಕೆಂಪೇಗೌಡರ ಬಗ್ಗೆ ಹಿಂದಿನ ಸಮಾಜ ವಿಜ್ಞಾನ ಪಠ್ಯದಲ್ಲಿ ಏನು ಇರಲಿಲ್ಲ ಎಂದು ಸಚಿವರು ಹೇಳಿದ್ದು ಸತ್ಯವಲ್ಲ. ಬರಗೂರರ ಪಠ್ಯದಲ್ಲಿ ಎರಡು ಪುಟಗಳಷ್ಟಿದ್ದ ಕೆಂಪೇಗೌಡರ ವಿಷಯವನ್ನು ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಲಾಗಿದೆ. ದಾಸ ಕೂಟದವರು ಅದರಲ್ಲೂ ವಿಶೇಷವಾಗಿ ಕನಕದಾಸರಂಥಹವರು ಜಾತಿ ತಾರತಮ್ಯ ವಿರೋಧಿಸಿದ್ದನ್ನು ಪರಿಷ್ಕರಣೆಯಲ್ಲಿ ಬಿಡಲಾಗಿರುವುದು ಸರಿಯಾದ ಕ್ರಮವಲ್ಲ’ ಎಂದು ಮಠಾಧೀಶರ ಒಕ್ಕೂಟ ಹೇಳಿದೆ.