ಲಾಭದತ್ತ ಸಾಗುವ ಆಶಯ: ಜನರ ಸೇವೆಯ ಜತೆಗೆ, ನಿಗಮವನ್ನು ಲಾಭದಾಯಕವಾಗಿ ಬೆಳೆಸುವತ್ತಲೂ ಗಮನ ಹರಿಸಬೇಕು. ಸೋರಿಕೆ ತಡೆಗಟ್ಟಿ, ಬಿಡಿಭಾಗಗಳ ಖರೀದಿಯಲ್ಲಿ ಪಾರದರ್ಶಕತೆ ತರಬೇಕು. ವೆಚ್ಚ ತಗ್ಗಿಸಬೇಕು. ಸಂಕಷ್ಟದಲ್ಲಿರುವ ನಿಗಮ ಗಳನ್ನು ಮೇಲೆತ್ತಲು ಸಿಬ್ಬಂದಿ ಸಹಕಾರ ನೀಡಬೇಕು. ಸಿಬ್ಬಂದಿಯ ವೇತನ ಹೆಚ್ಚಳ ಕುರಿತು ಸಂಘಟನೆಗಳ ಜತೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು. ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ ಈಗಾಗಲೇ ₹ 4,600 ಕೋಟಿ ನೀಡಲಾಗಿದೆ. ಈಚೆಗೆ ₹ 1 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.