‘ಸರ್ಕಾರದ ಆಡಳಿತದ ಭಾಗವಾಗಿರುವ ಯಾರಿಗಾದರೂ ಕೋವಿಡ್ ಸೋಂಕು ದೃಢಪಟ್ಟರೆ, ರೋಗ ವಾಸಿಯಾದ ತಕ್ಷಣವೇ ಅವರು ಕರ್ತವ್ಯಕ್ಕೆ ಮರಳಬಹುದು. ಅವರಿಗೆ 14 ದಿನಗಳ ಪ್ರತ್ಯೇಕ ವಾಸ ಕಡ್ಡಾಯವಲ್ಲ. ಆಡಳಿತ ಯಂತ್ರ ಹಳಿ ತಪ್ಪಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ತಿಂಗಳ ಹಿಂದೆಯೇ ಈ ಕುರಿತ ಮಾರ್ಗಸೂಚಿ ಹೊರಡಿಸಿದೆ. ಅನೇಕ ಅಧಿಕಾರಿಗಳು ಕೋವಿಡ್ ಗುಣಮುಖವಾದ ತಕ್ಷಣವೇ ಕರ್ತವ್ಯಕ್ಕೆ ಮರಳಿದ್ದಾರೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.