‘ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡುವೆಯೇ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಮಸೂದೆ ಮಂಡಿಸಿದರು. ಇದನ್ನು ವಿರೋಧಿಸಿ ನಮ್ಮ ಜತೆ ಜೆಡಿಎಸ್ ಸದಸ್ಯರೂ ಧರಣಿ ನಡೆಸಿದರು. ಆಗ ಉಪಸಭಾಪತಿ ಮಸೂದೆ ಮೇಲೆ ಚರ್ಚಿಸಲು ಎಲ್ಲರಿಗೂ ಅವಕಾಶ ನೀಡುವ ಭರವಸೆ ನೀಡಿದ್ದರು. ಸಿ.ಎಂ.ಇಬ್ರಾಹಿಂ, ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್, ತಿಪ್ಪೇಸ್ವಾಮಿ ಅವರು ಮಾತನಾಡಿದ್ದರು’.