ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘40 ಪರ್ಸೆಂಟ್ ಸರ್ಕಾರದ ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ. ಪಿಎಸ್ಐ ಹಗರಣ, ಎಮ್ಎಸ್ಐಎಲ್ ಹಗರಣ, ಗಂಗಾ ಕಲ್ಯಾಣ ಹಗರಣ ಇವೆಲ್ಲವೂ ಮೊದಲು ನಿರಾಕರಿಸಿ ನಂತರ ತನಿಖೆ ವಹಿಸಿದ ಪ್ರಕರಣಗಳು. ಬಸವರಾಜ ಬೊಮ್ಮಾಯಿ ಅವರೇ, ನಮ್ಮ ಆರೋಪಗಳಲ್ಲಿ ಸತ್ಯವಿರುವುದು ಅರ್ಥ ಆಗಿದೆಯಲ್ಲವೇ? ಮತ್ಯಾಕೆ ತಡ ಎಲ್ಲ ಅಕ್ರಮಗಳನ್ನೂ ನ್ಯಾಯಾಂಗ ತನಿಖೆಗೆ ವಹಿಸಿ’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.