ಕೆಪಿಸಿಸಿ ಟ್ವಿಟರ್ ಖಾತೆಯಿಂದಲೂ ಪ್ರತ್ಯೇಕ ಟ್ವೀಟ್ ಮಾಡಿದ್ದು, ‘ಕಾಂಗ್ರೆಸ್ನದ್ದು ಅನ್ನಭಾಗ್ಯ, ಬಿಜೆಪಿಯದ್ದು ಕನ್ನಭಾಗ್ಯ. ಬಿಜೆಪಿ ಆಡಳಿತದಲ್ಲಿ ಬಡವರ ಪಡಿತರ ಅಕ್ಕಿಯ ಕಳ್ಳಸಾಗಣೆ ಎಗ್ಗಿಲ್ಲದೇ ಸಾಗಿದ್ದರೂ ತಡೆಗಟ್ಟುವ ಯಾವ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯ ನೋಡಿದರೆ ಇದರಲ್ಲಿ ಬಿಜೆಪಿಯವರ ಪಾಲುದಾರಿಕೆಯೂ ಇರುವಂತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕೂಡಲೇಈ ಕಳ್ಳದಂಧೆ ತಡೆಗಟ್ಟಿ’ ಎಂದು ಒತ್ತಾಯಿಸಲಾಗಿದೆ.