ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಾಗಿಸುವ ಹುನ್ನಾರ: ತನ್ವೀರ್‌

Last Updated 25 ಮಾರ್ಚ್ 2023, 19:03 IST
ಅಕ್ಷರ ಗಾತ್ರ

ಮೈಸೂರು: ‘2ಬಿ‌ ಮೀಸಲಾತಿ ರದ್ದು ಮಾಡಿರುವುದು, ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಹುನ್ನಾರ’ ಎಂದು ಶಾಸಕ ತನ್ವೀರ್‌ ಸೇಠ್‌ ಶನಿವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮೀಸಲಾತಿ ರದ್ದು ಮಾಡಿರುವುದು ದ್ವೇಷ, ಸೇಡಿನ ರಾಜಕಾರಣ. ‘ಚುನಾವಣೆ ದೃಷ್ಟಿಯಿಂದ ಘೋಷಿಸಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ರದ್ದುಪಡಿಸುತ್ತೇವೆ’ ಎಂದರು. ‘ಬಿಜೆಪಿ ಸರ್ಕಾರ ಮುಸ್ಲಿಮರನ್ನಷ್ಟೇ ಅಲ್ಲದೆ ದಲಿತರನ್ನೂ ವಂಚಿಸಿದೆ. ಜಾತಿ ಒಡೆಯಲು ಮುಂದಾಗಿದೆ. ಮೀಸಲಾತಿ ಆಮಿಷವೊಡ್ಡಿ ಅನ್ಯಾಯ ಮಾಡುತ್ತಿದೆ‘ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT