ತಿದ್ದುಪಡಿಯ ಪ್ರಮುಖ ಅಂಶಗಳು
*ಪಿಂಚಣಿ ಸೌಲಭ್ಯ ₹2,000 ದಿಂದ ₹3,000 ಕ್ಕೆ ಹೆಚ್ಚಳ
* ಗೃಹ ಭಾಗ್ಯ ಸೌಲಭ್ಯದಡಿ 21ರಿಂದ 50 ವರ್ಷದ ನೋಂದಾಯಿತ ಫಲಾನುಭವಿಗಳಿಗೆ ಮನೆ ಕಟ್ಟಲು 10 ಕಂತುಗಳಲ್ಲಿ ಸಾಲ ನೀಡಲು ನಿಯಮಗಳ ಸರಳೀಕರಣ
* ಹೆರಿಗೆ ಸೌಲಭ್ಯದಡಿ ಸಹಾಯಧನ ₹50 ಸಾವಿರಕ್ಕೆ ಹೆಚ್ಚಳ
*ಅಂತಿಮ ಸಂಸ್ಕಾರ ವೆಚ್ಚ ಸೌಲಭ್ಯದಡಿ ಸಹಾಯ ಧನ ₹50,000 ದಿಂದ ₹71,000ಕ್ಕೆ ಹೆಚ್ಚಳ. ಕೋವಿಡ್ನಿಂದ ಫಲಾನುಭವಿ ಮೃತಪಟ್ಟರೆ ಅವಲಂಬಿತರಿಗೆ ₹2 ಲಕ್ಷ ಸಹಾಯಧನ
* ಫಲಾನುಭವಿಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ತರಬೇತಿ, ಕಲಿಕಾ ಕಿಟ್, ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ ವಿತರಣೆ
* ವೈದ್ಯಕೀಯ ಸೌಲಭ್ಯದಡಿ ಸಹಾಯಧನ ₹10,000 ದಿಂದ ₹20,000 ಕ್ಕೆ ಹೆಚ್ಚಳ, ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಂಚಾರಿ ವೈದ್ಯಕೀಯ ಘಟಕಗಳ ಸ್ಥಾಪನೆ, ಅವಶ್ಯಕತೆ ಇದ್ದಾಗ ಪೌಷ್ಟಿಕ ಆಹಾರ ಕಿಟ್ಗಳ ವಿತರಣೆ.
* ಫಲಾನುಭವಿ ಕೆಲಸ ಮಾಡುವ ಸ್ಥಳದಲ್ಲಿ ಅಪಘಾತದಿಂದ ಮೃತ ಪಟ್ಟರೆ ಅವಲಂಬಿತರಿಗೆ ಪರಿಹಾರ ₹2 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ
* ಮದುವೆ ಸಹಾಯಧನದ ಮೊತ್ತ ₹50,000 ದಿಂದ ₹60,000 ಕ್ಕೆ ಏರಿಕೆ
* ಸಾರಿಗೆ ಸೌಲಭ್ಯದಡಿ ಫಲಾನುಭವಿಗಳಿಗೆ ರಾಜ್ಯದಾದ್ಯಂತ ಕೆಎಸ್ಆರ್ಟಿಸಿ ಬಸ್ಪಾಸ್ ಸೌಲಭ್ಯ ಒದಗಿಸುವುದು.
* ಮಂಡಳಿಯ ಕಾರ್ಯದರ್ಶಿಗಳಿಗೆ ಆರ್ಥಿಕ ಇಲಾಖೆ ನಿಗದಿ ಮಾಡಿರುವ ವಿತ್ತಾಧಿಕಾರ ₹2 ಕೋಟಿಯಿಂದ ₹2.5 ಕೋಟಿಗೆ ಹೆಚ್ಚಿಸುವುದು