ನಗರದ ಪ್ರಕಾಶ್ ಮೆಹರವಾಡೆ, ಅವರ ಪತ್ನಿ ಸುಧಾ ಮೆಹರವಾಡೆ ಹಾಗೂ ಹುಬ್ಬಳ್ಳಿಯ ಇವರ ಎಂಟು ಜನ ಸಂಬಂಧಿಕರು ಒಟ್ಟಿಗೆ ಮಾ. 5ರಂದು ಬೆಂಗಳೂರು, ನವದೆಹಲಿ ಮೂಲಕ ಶ್ರೀನಗರ ತಲುಪಿದ್ದಾರೆ. ತಲಾ ಎರಡು ದಿನ ಗುಲ್ಮರ್ಗ್, ಪೆಹಲ್ಗಾಂನಲ್ಲಿ ಸುತ್ತಾಡಿದ್ದಾರೆ. ಮಾ. 9ರಂದು ಸೋನ್ಮರ್ಗ್ಕ್ಕೆ ತೆರಳಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಸತತ ಹಿಮಪಾತ ಆಗುತ್ತಿರುವುದರಿಂದ ಮೂರು ದಿನಗಳಿಂದ ಅಲ್ಲಿಂದ ಹೊರಬರಲು ಸಾಧ್ಯವಾಗಿಲ್ಲ.