ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆ ಉಪ ಆಯುಕ್ತೆ ಸಿ. ಸೆಲೆನಾ ಮತ್ತು ಅಬಕಾರಿ ನಿರೀಕ್ಷಕ ಅಜಯ್ ಅವರು ಮೊಬೈಲ್ ದೂರವಾಣಿಯಲ್ಲಿ ನಡೆಸಿರುವ ಸಂಭಾಷಣೆ ಗಮನಿಸಿದರೆ ₹5 ಲಕ್ಷ ಸಂಗ್ರಹಿಸಲಾಗುತ್ತಿದೆ ಎಂಬ ಅಂಶ ತಿಳಿಯುತ್ತದೆ. ಸಂಭಾಷಣೆಯಲ್ಲಿ ಕುಮಾರ್, ಮಂಜುನಾಥ್, ರಮೇಶ್, ನಾಗರಾಜ್, ಪಾಷ, ಶಿವಪ್ರಸಾದ್, ಸುಮತಿ, ನಾಗರಾಜಪ್ಪ ಹಾಗೂ ಕೆಲ ಅಧಿಕಾರಿಗಳ ಪದನಾಮ ಮತ್ತು ಊರುಗಳನ್ನು ಉಲ್ಲೇಖಿಸಲಾಗಿದೆ.