<p><strong>ಬೆಂಗಳೂರು: </strong>ಕೋವಿಡ್ ಪರೀಕ್ಷೆ ಹೆಸರಿನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕಿ ವಿನಿಷಾ ನಿರೋ ವಿಧಾನಸಭೆಯಲ್ಲಿ ದೂರಿದರು.</p>.<p>ಕಾಂಗ್ರೆಸ್ನ ಎನ್.ಎ.ಹ್ಯಾರಿಸ್ ಅವರ ಗಮನಸೆಳೆಯುವ ಸೂಚನೆಯಡಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿನಿಷಾ, ಅಲ್ಲಿನ ಸಿಬ್ಬಂದಿ ಬಾಯಿ ಬಿಟ್ಟು ಲಂಚ ಕೇಳುತ್ತಾರೆ ಎಂದರು.</p>.<p>ಆರ್ಟಿ–ಪಿಸಿಆರ್ ಕೋವಿಡ್ ಪರೀಕ್ಷೆಗೆ ₹1,500 ಕೇಳುತ್ತಾರೆ. ಹೆಚ್ಚುವರಿಯಾಗಿ ₹1,500 ಕೊಟ್ಟರೆ ಮೂರು ನಿಮಿಷಗಳಲ್ಲೇ ವರದಿ ನೀಡುತ್ತಾರೆ. ನಾವು ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಹೋದ ವರದಿಯನ್ನು ಒಪ್ಪುವುದಿಲ್ಲ. ಶಾಸಕರಾದ ನಮಗೇ ಮೋಸ ಮಾಡುತ್ತಾರೆ, ಸಾಮಾನ್ಯ ಜನರ ಪಾಡೇನು ಎಂದು ವಿನಿಷಾ ಪ್ರಶ್ನಿಸಿದರು.</p>.<p>ವಿದೇಶಗಳಿಗೆ ಹೋಗುವವರು ಅಲ್ಲಿ ಅಸಹಾಯಕರಾಗಿ ಕೇಳಿದಷ್ಟು ಹಣ ಕೊಟ್ಟು ಕೋವಿಡ್ ಪರೀಕ್ಷೆ ನಡೆಸಬೇಕಾಗಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದರು.</p>.<p>ಹ್ಯಾರಿಸ್ ಮಾತನಾಡಿ, ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಮತ್ತು ಆರ್ಟಿ–ಪಿಸಿಆರ್ ಪರೀಕ್ಷೆಗಳಿಗೆ ದರ ಏಕರೂಪಗೊಳಿಸಬೇಕು. ಆರ್ಟಿ–ಪಿಸಿಆರ್ ಪರೀಕ್ಷೆಗೆ ₹3,200 ಶುಲ್ಕ ವಿಧಿಸುವ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಮಾನ ನಿಲ್ದಾಣದಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದನ್ನು ಕಡ್ಡಾಯ ಮಾಡಿಲ್ಲ. ಅಲ್ಲಿ ನಡೆಸುವ ಆರ್ಟಿ– ಪಿಸಿಆರ್ ಪರೀಕ್ಷೆಯಲ್ಲಿ ಕಾರ್ಟಿಜ್ ಬಳಸಲಾಗುತ್ತದೆ. ಅದರಲ್ಲಿ ಎರಡು ಮೂರು ಬಗೆಯ ಪರೀಕ್ಷೆ ನಡೆಸುವುದರಿಂದ, ಅದರ ಬೆಲೆ ಜಾಸ್ತಿ. ಈ ಬಗ್ಗೆ ಸಂದೇಹ ಇರುವ ಸದಸ್ಯರಿಗೆ ಅಧಿಕಾರಿಗಳ ಜತೆ ಕೂರಿಸಿ ಮಾಹಿತಿ ಕೊಡಿಸುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೋವಿಡ್ ಪರೀಕ್ಷೆ ಹೆಸರಿನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕಿ ವಿನಿಷಾ ನಿರೋ ವಿಧಾನಸಭೆಯಲ್ಲಿ ದೂರಿದರು.</p>.<p>ಕಾಂಗ್ರೆಸ್ನ ಎನ್.ಎ.ಹ್ಯಾರಿಸ್ ಅವರ ಗಮನಸೆಳೆಯುವ ಸೂಚನೆಯಡಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿನಿಷಾ, ಅಲ್ಲಿನ ಸಿಬ್ಬಂದಿ ಬಾಯಿ ಬಿಟ್ಟು ಲಂಚ ಕೇಳುತ್ತಾರೆ ಎಂದರು.</p>.<p>ಆರ್ಟಿ–ಪಿಸಿಆರ್ ಕೋವಿಡ್ ಪರೀಕ್ಷೆಗೆ ₹1,500 ಕೇಳುತ್ತಾರೆ. ಹೆಚ್ಚುವರಿಯಾಗಿ ₹1,500 ಕೊಟ್ಟರೆ ಮೂರು ನಿಮಿಷಗಳಲ್ಲೇ ವರದಿ ನೀಡುತ್ತಾರೆ. ನಾವು ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಹೋದ ವರದಿಯನ್ನು ಒಪ್ಪುವುದಿಲ್ಲ. ಶಾಸಕರಾದ ನಮಗೇ ಮೋಸ ಮಾಡುತ್ತಾರೆ, ಸಾಮಾನ್ಯ ಜನರ ಪಾಡೇನು ಎಂದು ವಿನಿಷಾ ಪ್ರಶ್ನಿಸಿದರು.</p>.<p>ವಿದೇಶಗಳಿಗೆ ಹೋಗುವವರು ಅಲ್ಲಿ ಅಸಹಾಯಕರಾಗಿ ಕೇಳಿದಷ್ಟು ಹಣ ಕೊಟ್ಟು ಕೋವಿಡ್ ಪರೀಕ್ಷೆ ನಡೆಸಬೇಕಾಗಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದರು.</p>.<p>ಹ್ಯಾರಿಸ್ ಮಾತನಾಡಿ, ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಮತ್ತು ಆರ್ಟಿ–ಪಿಸಿಆರ್ ಪರೀಕ್ಷೆಗಳಿಗೆ ದರ ಏಕರೂಪಗೊಳಿಸಬೇಕು. ಆರ್ಟಿ–ಪಿಸಿಆರ್ ಪರೀಕ್ಷೆಗೆ ₹3,200 ಶುಲ್ಕ ವಿಧಿಸುವ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಮಾನ ನಿಲ್ದಾಣದಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದನ್ನು ಕಡ್ಡಾಯ ಮಾಡಿಲ್ಲ. ಅಲ್ಲಿ ನಡೆಸುವ ಆರ್ಟಿ– ಪಿಸಿಆರ್ ಪರೀಕ್ಷೆಯಲ್ಲಿ ಕಾರ್ಟಿಜ್ ಬಳಸಲಾಗುತ್ತದೆ. ಅದರಲ್ಲಿ ಎರಡು ಮೂರು ಬಗೆಯ ಪರೀಕ್ಷೆ ನಡೆಸುವುದರಿಂದ, ಅದರ ಬೆಲೆ ಜಾಸ್ತಿ. ಈ ಬಗ್ಗೆ ಸಂದೇಹ ಇರುವ ಸದಸ್ಯರಿಗೆ ಅಧಿಕಾರಿಗಳ ಜತೆ ಕೂರಿಸಿ ಮಾಹಿತಿ ಕೊಡಿಸುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>