‘ರಾಜ್ಯದಲ್ಲಿ ರೆಮ್ಡಿಸಿವಿರ್ ಕೊರತೆ ಎದುರಾಗಿ ತಿಂಗಳಾಗಿದೆ. ಇನ್ನೂ ಕೂಡ ಸಮಸ್ಯೆ ಬಗೆಹರಿದಿಲ್ಲ. ಕರ್ನಾಟಕದವರೇ ಆದ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರೇ ಫಾರ್ಮಾಸೂಟಿಕಲ್ಸ್ ವಿಭಾಗವನ್ನೂ ನಿಭಾಯಿಸುತ್ತಿದ್ದಾರೆ. ಆದರೂ ರಾಜ್ಯಕ್ಕೆ ನ್ಯಾಯ ಒದಗಿಸಲಾಗದ್ದು ಇವರ ಅಸಾಮರ್ಥ್ಯಕ್ಕೆ ಸಾಕ್ಷಿ. ರಾಜ್ಯದ ಬಿಜೆಪಿ ನಾಯಕರ ಹೇಡಿತನವೇ ಕೇಂದ್ರದ ಮಲತಾಯಿ ಧೋರಣೆಗೆ ಕಾರ’ ಎಂದು ಟ್ವೀಟ್ನಲ್ಲಿ ಕಾಂಗ್ರೆಸ್ ಅಕ್ರೋಶ ವ್ಯಕ್ತಪಡಿಸಿದೆ.