ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 13 ನಗರಗಳಲ್ಲಿ ಆರ್‌ಎಸ್‌ಎಸ್‌ನಿಂದ ಕೋವಿಡ್‌ ಆರೈಕೆ ಕೇಂದ್ರ

Last Updated 21 ಮೇ 2021, 3:54 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಸೇವಾ ಭಾರತಿ ಕರ್ನಾಟಕವು ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಿವೆ.

ರಾಜ್ಯದ ಒಟ್ಟು169 ಕೇಂದ್ರಗಳಲ್ಲಿ ಸಹಾಯವಾಣಿ ತೆರೆದು ಅವುಗಳ ಮೂಲಕ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿವೆ. ಒಟ್ಟು346 ಸ್ಥಾನಗಳಲ್ಲಿ10,771 ಮಂದಿಗೆ ಲಸಿಕೆ ನೀಡಲು ಸಹಕರಿಸಲಾಗಿದ್ದು,253 ಇತರ ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಸಹಭಾಗಿತ್ವ ವಹಿಸಿವೆ.

ಇತರ ಕಾರ್ಯಗಳು

-13 ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ 1,121 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾದವರ ಪೈಕಿ ಒಟ್ಟು 650 ಮಂದಿಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

-ಎರಡು ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಿ, ಆಮ್ಲಜನಕ ಸೌಲಭ್ಯವಿರುವ 50 ಹಾಗೂ ಇತರ 110 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ದಾಖಲಾಗಿದ್ದವರ ಪೈಕಿ 130 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

-66 ನಗರಗಳ ಸರ್ಕಾರಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 319 ಕಾರ್ಯಕರ್ತರು ವಿವಿಧ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.

-ಆನ್‌ಲೈನ್ ವೈದ್ಯ ಸಹಾಯವಾಣಿಯ ಮೂಲಕ 134 ಸ್ಥಾನಗಳಲ್ಲಿ 2,817 ಮಂದಿಗೆ ಸಲಹೆ ಮತ್ತು ನೆರವು ನೀಡಲಾಗಿದೆ. ಈ ಕಾರ್ಯಕ್ಕೆ 378 ವೈದ್ಯರು ಕೈಜೋಡಿಸಿದ್ದಾರೆ.

-64 ಕಡೆಗಳಲ್ಲಿ 26,576 ಮಂದಿಗೆ ಆಹಾರದ ಕಿಟ್ ವಿತರಣೆ.

-ರಾಜ್ಯದಾದ್ಯಂತ 105 ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿ 9,388 ಯೂನಿಟ್ ರಕ್ತ ಸಂಗ್ರಹ.

-27 ಕಡೆಗಳಲ್ಲಿ ಪ್ಲಾಸ್ಮಾ ದಾನದ ವ್ಯವಸ್ಥೆ ಮಾಡಲಾಗಿದೆ. 151 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.

-ರಾಜ್ಯದ198 ಕಡೆ 6,895 ಮಂದಿಗೆ ಆಯುರ್ವೇದಿಕ್‌ ಕಷಾಯ ವಿತರಣೆ.

-ಮಾನಸಿಕ ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು 87 ಕಡೆ ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3,325 ಮಂದಿ ಇದರ ಪ್ರಯೋಜನ‍ಪಡೆದಿದ್ದಾರೆ.

-ರಾಜ್ಯದಾದ್ಯಂತ 158 ಪ್ರದೇಶ
ಗಳಲ್ಲಿ ಸಂಘದ ಸ್ವಯಂಸೇವಕರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಿರ್ವಹಿಸಿದ್ದಾರೆ.

-93 ಸ್ಥಾನಗಳಲ್ಲಿ ಮೃತದೇಹ ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ.

ಹೆಚ್ಚಿನ ಮಾಹಿತಿಗೆ:ಪ್ರವೀಣ್‌ ಪಟವರ್ಧನ್‌ 9845342972, ರಾಧಾಕೃಷ್ಣ ಹೊಳ್ಳ 9731264009.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT