ಕಲಬುರ್ಗಿ: ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ವಿಧಿಸಿರುವ ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಕೇಂದ್ರ ಸಚಿವ ಭಗವಂತ ಖೂಬಾ ಅವರುಮಂಗಳವಾರ ರಾತ್ರಿ ನಗರದಲ್ಲಿಜನಾಶೀರ್ವಾದ ಯಾತ್ರೆಯ ಸಭಾ ಕಾರ್ಯಕ್ರಮ ನಡೆಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸಚಿವರು ತಡವಾಗಿ ಬಂದಿದ್ದರಿಂದ ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಯಿತು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಅವರು ತಮ್ಮ ಭಾಷಣದಲ್ಲಿ ಕರ್ಫ್ಯೂ ಆರಂಭವಾಗುವುದರೊಳಗಾಗಿ ಕಾರ್ಯಕ್ರಮ ಮುಗಿಸಬೇಕುಎಂದು ತಿಳಿಸಿದರು. ಆದರೆ, ಸಚಿವ ಖೂಬಾ ಅವರ ಭಾಷಣ ರಾತ್ರಿ 9.25ಕ್ಕೆ ಆರಂಭವಾಯಿತು. 9.49ಕ್ಕೆ ಕಾರ್ಯಕ್ರಮ ಮುಗಿಯಿತು.
ನೋಟಿಸ್: ಯಾತ್ರೆಗೆ ಅನುಮತಿ ನೀಡಿರಲಿಲ್ಲ. ಸಂಘಟಕರಿಗೆ ನೋಟಿಸ್ ಜಾರಿಗೊಳಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಪ್ರತಿಕ್ರಿಯಿಸಿದರು.