ಐದು ಮಂದಿಗೆ ಗೌರವ ಸದಸ್ಯತ್ವ ಪ್ರದಾನ:ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿಗಳಾದದೊಡ್ಡರಂಗೇಗೌಡ, ಗೊ.ರು.ಚನ್ನಬಸಪ್ಪ, ಹಂಪ ನಾಗರಾಜಯ್ಯ, ಹಾಗೂ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು. ಸಾಹಿತಿ ವೀಣಾ ಶಾಂತೇಶ್ವರ ಅವರೂ ಈ ಸದಸ್ಯತ್ವಕ್ಕೆ ಭಾಜನರಾಗಿದ್ದಾರೆ. ಗೌರವ ಸದಸ್ಯತ್ವವು ತಲಾ ₹1 ಲಕ್ಷ ನಗದು ಹಾಗೂ ತಾಮ್ರಫಲಕ ಒಳಗೊಂಡಿವೆ.