‘ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಈ ಹುದ್ದೆಯಲ್ಲಿರುವಷ್ಟು ದಿನ ಬಡವರು, ತುಳಿತಕ್ಕೊಳಗಾದವರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದರು. ಪಲಾಯನವಾದ ಅನುಸರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಿರ್ಜೀವ ವಸ್ತುಗಳಾಗಿರುವ ಸಂಸತ್ ಭವನದ ಎಲ್ಲಾ ಕಂಬಗಳಿಂದಲೂ ದೇವರು ಪ್ರತ್ಯಕ್ಷನಾಗಬಲ್ಲ ಎಂಬುದನ್ನೂ ತಿಳಿಸಿದ್ದರು’ ಎಂದು ಸ್ಮರಿಸಿದರು.