ಆರೋಗ್ಯ ಪರೀಕ್ಷೆ ನಡೆಸುತ್ತಿದ್ದ ಹೊರರೋಗಿ ವಿಭಾಗದ ಬಳಿ ಭಕ್ತರು ಜಮಾಯಿಸಿದರು. ಆಸ್ಪತ್ರೆಯ ಕಾಂಪೌಂಡ್, ಕಟ್ಟಡದ ಮೇಲೆ ನಿಂತು ಕುತೂಹಲ ಭರಿತರಾಗಿ ನೋಡುತ್ತಿದ್ದರು. ಶರಣರನ್ನು ತೀವ್ರ ನಿಘಾ ಘಟಕಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಏಕಾಏಕಿ ಜಮಾಯಿಸಿದರು. ಪೊಲೀಸರು ಗುಂಪು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.