‘ದೇಶದ ಯಾವುದೇ ಭಾಗದಲ್ಲಿ ಪ್ರಕಟವಾಗುವ ಸುದ್ದಿಯನ್ನು ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೆಯೇ, ತಡೆಯುವ, ಅಳಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರವನ್ನು ಈ ನಿಯಮಾವಳಿಗಳು ಕೇಂದ್ರ ಸರ್ಕಾರಕ್ಕೆ ನೀಡುತ್ತವೆ. ಅಲ್ಲದೆ, ಎಲ್ಲಾ ಪ್ರಕಾಶಕರೂ ಕುಂದುಕೊರತೆ ನಿವಾರಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸುವಂತೆಯೂ ಒತ್ತಾಯಿಸುತ್ತವೆ. ಹೊಸ ನಿಯಮಾವಳಿಗಳಲ್ಲಿ ಕೆಲವು ಡಿಜಿಟಲ್ ಮಾಧ್ಯಮಕ್ಕೆ ಅಸಮಂಜಸವಾದವುಗಳಾಗಿವೆ’ ಎಂದು ಕೂಟ ಹೇಳಿದೆ.