<p><strong>ಬೆಂಗಳೂರು:</strong> ‘ಎಲ್ಲಿದೆ ಗುಜರಾತ್ ಮಾದರಿ? ನಿರುದ್ಯೋಗ ಸೃಷ್ಟಿಯೇ ಗುಜರಾತ್ ಮಾದರಿಯಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.</p>.<p>ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದ ತಂಡದ ಗುಜರಾತ್ ಪ್ರವಾಸ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಲಾಕ್ಡೌನ್, ಸೀಲ್ಡೌನ್ ಎಲ್ಲ ಮಾಡಲಾಯಿತು. ಉದ್ಯಮಿಗಳ ಪರ ಎಂದು ಬಿಂಬಿಸಿಕೊಂಡ ಬಿಜೆಪಿ ಸರ್ಕಾರ, ತೆರಿಗೆಯನ್ನು ಏಕೆ ಮನ್ನಾ ಮಾಡಲಿಲ್ಲ’ ಎಂದು ಕೇಳಿದರು.</p>.<p><strong>ಓದಿ:</strong><a href="https://www.prajavani.net/karnataka-news/minister-jagadish-shettar-headed-team-in-gujarath-for-study-848816.html" target="_blank">ಸಚಿವ ಶೆಟ್ಟರ್ ನೇತೃತ್ವದ ತಂಡದಿಂದ ಗುಜರಾತ್ ಪ್ರವಾಸ</a></p>.<p>‘ಸರ್ಕಾರದವರು ಅಧ್ಯಯನ ಮಾಡಲು ಗುಜರಾತ್ಗೆ ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವ ಮಾದರಿಯನ್ನಾದರೂ ಅವರು ನೀಡಲಿ. ಆದರೆ, ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಆಗ್ರಹಿಸಿದರು.</p>.<p>ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿಯವರು ಧ್ವನಿ ಎತ್ತಬೇಕು. ಗುಜರಾತ್ಗೆ ನೀಡಿರುವ ಲಸಿಕೆಯ ಅರ್ಧದಷ್ಟನ್ನೂ ಕರ್ನಾಟಕಕ್ಕೆ ನೀಡಿಲ್ಲ. ಗುಜರಾತ್ಗೆ ಸರಿಸಮನಾಗಿ ಲಸಿಕೆ ಹಂಚಿಕೆ ಮಾಡುವಂತೆ ಬೇಡಿಕೆ ಇಡಬೇಕು ಎಂದು ಶಿವಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಎಲ್ಲಿದೆ ಗುಜರಾತ್ ಮಾದರಿ? ನಿರುದ್ಯೋಗ ಸೃಷ್ಟಿಯೇ ಗುಜರಾತ್ ಮಾದರಿಯಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.</p>.<p>ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದ ತಂಡದ ಗುಜರಾತ್ ಪ್ರವಾಸ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಲಾಕ್ಡೌನ್, ಸೀಲ್ಡೌನ್ ಎಲ್ಲ ಮಾಡಲಾಯಿತು. ಉದ್ಯಮಿಗಳ ಪರ ಎಂದು ಬಿಂಬಿಸಿಕೊಂಡ ಬಿಜೆಪಿ ಸರ್ಕಾರ, ತೆರಿಗೆಯನ್ನು ಏಕೆ ಮನ್ನಾ ಮಾಡಲಿಲ್ಲ’ ಎಂದು ಕೇಳಿದರು.</p>.<p><strong>ಓದಿ:</strong><a href="https://www.prajavani.net/karnataka-news/minister-jagadish-shettar-headed-team-in-gujarath-for-study-848816.html" target="_blank">ಸಚಿವ ಶೆಟ್ಟರ್ ನೇತೃತ್ವದ ತಂಡದಿಂದ ಗುಜರಾತ್ ಪ್ರವಾಸ</a></p>.<p>‘ಸರ್ಕಾರದವರು ಅಧ್ಯಯನ ಮಾಡಲು ಗುಜರಾತ್ಗೆ ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವ ಮಾದರಿಯನ್ನಾದರೂ ಅವರು ನೀಡಲಿ. ಆದರೆ, ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು ಆಗ್ರಹಿಸಿದರು.</p>.<p>ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿಯವರು ಧ್ವನಿ ಎತ್ತಬೇಕು. ಗುಜರಾತ್ಗೆ ನೀಡಿರುವ ಲಸಿಕೆಯ ಅರ್ಧದಷ್ಟನ್ನೂ ಕರ್ನಾಟಕಕ್ಕೆ ನೀಡಿಲ್ಲ. ಗುಜರಾತ್ಗೆ ಸರಿಸಮನಾಗಿ ಲಸಿಕೆ ಹಂಚಿಕೆ ಮಾಡುವಂತೆ ಬೇಡಿಕೆ ಇಡಬೇಕು ಎಂದು ಶಿವಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>