‘ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆಯವರ ಬಾಯಿಗೆ ಅಂಟಿಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಯಲಿ, ಆರೋಪಿಗಳನ್ನು ಬಂಧಿಸಲಿ, ಸತ್ಯಾಂಶ ಹೊರಗೆ ಬರಲಿ. ಇದರ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ ಅವರು, ‘ಕಾನೂನು ಸುವ್ಯವಸ್ಥೆ, ಗೃಹ ಸಚಿವ, ಸರ್ಕಾರದ ವೈಫಲ್ಯವೇ ಈ ಘಟನೆಗೆ ಕಾರಣ’ ಎಂದೂ ಅವರು ದೂರಿದರು.