‘ಮಧ್ಯಮ ವರ್ಗದ ಮಕ್ಕಳಿಗೆ ಪೋಷಕರು, ಮನೆ, ಶಿಕ್ಷಕರು, ಶಾಲೆಗಳಿಂದ ಕಲಿಕೆಯ ಅವಕಾಶಗಳು ಸಿಗುತ್ತವೆ. ಆದರೆ, ಬಡವರ್ಗದ ಮಕ್ಕಳು ಅಧಿಕಾರದಲ್ಲಿರುವವರ ಉದಾಸೀನತೆಗೆ ಬೆಲೆ ತೆರುವಂತಾಗಿದೆ. ಜ. 31ರ ಮೊದಲು ಅಂಗನವಾಡಿ ತೆರೆಯಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಅವೈಜ್ಞಾನಿಕ ತಾರ್ಕಿಕತೆಯ ಆಧಾರದಲ್ಲಿ ಒಂದರಿಂದ ಎಂಟರವರೆಗಿನ ತರಗತಿಗಳನ್ನು ತೆರೆಯಲು ಹಿಂಜರಿಯುತ್ತಿದೆ’ ಎಂದೂ ಅವರು ಹೇಳಿದ್ದಾರೆ.