ಎಚ್ಚರಿಕೆ ನೀಡಿದ ಚಂದ್ರಪ್ಪ: ‘ಕೊರೊನಾ ಸಂಕಷ್ಟದಲ್ಲೂ ಕಷ್ಟವಿದ್ದಾಗ ಸಾರಿಗೆ ಇಲಾಖೆ ₹ 1,780 ಕೋಟಿ ನೀಡಿದ್ದು, ಸಂಸ್ಥೆಯ 1.30 ಲಕ್ಷ ಸಿಬ್ಬಂದಿಗೆ ವೇತನ ಕೊಡುವಂತಾಯಿತು. 30 ಸಾವಿರ ಬಸ್ಗಳಲ್ಲಿ ಇನ್ನು 10 ಸಾವಿರ ಬಸ್ಗಳು ಓಡುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಯಾರದೋ ಮಾತು ಕೇಳಿ ದಿಢೀರ್ ಪ್ರತಿಭಟಿಸಿದ್ದು, ಸರಿಯಲ್ಲ. ಮುಂದೆ ಹೀಗೆ ಮಾಡಿದರೆ ಉದ್ಯೋಗಕ್ಕೆ ಕುತ್ತು ಬರಬಹುದು’ ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ ಚಂದ್ರಪ್ಪ ಎಚ್ಚರಿಕೆ ನೀಡಿದರು.