<p><strong>ಬೆಂಗಳೂರು:</strong> ‘ಮಗಳ ಮದುವೆ ಮಾಡುವುದು ಪ್ರತಿ ಅಪ್ಪನ ಕನಸು. ಅದರಂತೆ ನನ್ನ ಮದುವೆಯ ಸಿದ್ಧತೆಗಳೂ ಅಂತಿಮ ಹಂತ ತಲುಪಿದ್ದವು.ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಪ್ಪ(ಮಂಜುನಾಥ್) ನನ್ನ ಮದುವೆಯಲ್ಲಿ ಅಕ್ಷತೆ ಕಾಳು ಹಾಕಬೇಕಿತ್ತು.ಅದು, ನನಸಾಗುವ ಹೊತ್ತಿನಲ್ಲೇ ಕೋವಿಡ್ ಅವರನ್ನು ನಮ್ಮಿಂದಬರಸಿಡಿಲಿನಂತೆ ದೂರ ಮಾಡಿತು’. </p>.<p>‘ಮೌನದಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಪ್ಪ, ಅವರ ಇಚ್ಛೆಯಂತೆ ಜವಾಬ್ದಾರಿಯುತ ವರನೊಂದಿಗೆ ಮದುವೆ ನಿಶ್ಚಿಯಿಸಿದ್ದರು. ಆದರೆ, ಮದುವೆ ಸಂಭ್ರಮದ ಕ್ಷಣಗಳನ್ನು ಕಳೆಯಲು ಅವರು ಈಗ ನಮ್ಮೊಂದಿಗೆ ಇಲ್ಲ.’</p>.<p>‘ಕೆಲವರಿಗೆ ಅಪ್ಪ ಎಂದ ಕೂಡಲೇ ನೆನಪಾಗುವುದುಸಿಡುಕತನ ಹಾಗೂ ಗಂಭೀರ ಸ್ವಭಾವ. ಇದನ್ನು ಅವರು ಜೀವಿಸಿದ್ದ ಅವಧಿಯಲ್ಲಿ ನಾನು ಕಂಡವಳೇ ಅಲ್ಲ. ಇಬ್ಬರು ಹೆಣ್ಣುಮಕ್ಕಳನ್ನೂ ತನ್ನ ಕಣ್ಣುಗಳಂತೆ ಜೋಪಾನ ಮಾಡಿದ್ದರು’.</p>.<p>‘ನಮಗಾಗಿ ಅವರು ಎಷ್ಟೋ ಬಾರಿ ನಿದ್ರೆಯನ್ನು ಮರೆತಿದ್ದರು. ನಮ್ಮ ಜೀವನಕ್ಕೆ ಬುನಾದಿಯಾಗಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಮಾರ್ಗದರ್ಶನ ನಮ್ಮ ಜೀವನದ ಒಂದು ಘಟ್ಟವನ್ನು ಸರಾಗವಾಗಿ ತಲುಪಿಸಿದೆ’.</p>.<p>‘ಭೌತಿಕವಾಗಿ ಅವರಿಲ್ಲದ ದಿನಗಳನ್ನು ಕಳೆಯುವುದು ಸವಾಲಾಗಿದೆ. ಆದರೆ, ಹೆಜ್ಜೆ ಮುಂದಕ್ಕೆ ಸಾಗಲೇಬೇಕು. ಅವರು ನಮ್ಮೊಂದಿಗೆ ಇದ್ದಾರೆ, ನಮ್ಮ ಜೊತೆಗೂಡುತ್ತಾರೆ ಎಂಬ ನಿರೀಕ್ಷಾ ಭಾವ, ಪ್ರತಿ ಹೆಜ್ಜೆಯಲ್ಲೂ ನಮಗೆ ಬಲ ನೀಡುತ್ತಿದೆ’.</p>.<p>‘ಅವರಿದ್ದಾಗ ನಡೆದ ತಂಗಿ ಶಿವಾಲಿಯ ರಂಗಪ್ರವೇಶದ ದಿನ ಎಂದಿಗೂ ಮಾಸುವುದಿಲ್ಲ. ಅಪ್ಪನನ್ನುಬಿಟ್ಟುಒಂದು ದಿನವೂ ಇರಲಾರದ ನಮ್ಮಿಂದ ಅವರು ಬಲುದೂರ ಸಾಗಿದ್ದಾರೆ. ಅವರಿಗೆ ಅಪ್ಪಂದಿರ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾರೆ. ಅವರ ಜೀವಂತಿಕೆಯಲ್ಲಿ ನಮ್ಮ ಪಾಲಿಗೆ ಪ್ರತಿದಿನವೂ ‘ಅಪ್ಪಂದಿರ ದಿನ’.</p>.<p><strong>–ಸೋನಾಲಿ ಮಂಜುನಾಥ್, <span class="Designate">ರಾಜಾಜಿನಗರ, ಬೆಂಗಳೂರು</span></strong></p>.<p><strong><span class="Designate">ನಿರೂಪಣೆ: ಮನೋಹರ್ ಎಂ.</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಗಳ ಮದುವೆ ಮಾಡುವುದು ಪ್ರತಿ ಅಪ್ಪನ ಕನಸು. ಅದರಂತೆ ನನ್ನ ಮದುವೆಯ ಸಿದ್ಧತೆಗಳೂ ಅಂತಿಮ ಹಂತ ತಲುಪಿದ್ದವು.ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಪ್ಪ(ಮಂಜುನಾಥ್) ನನ್ನ ಮದುವೆಯಲ್ಲಿ ಅಕ್ಷತೆ ಕಾಳು ಹಾಕಬೇಕಿತ್ತು.ಅದು, ನನಸಾಗುವ ಹೊತ್ತಿನಲ್ಲೇ ಕೋವಿಡ್ ಅವರನ್ನು ನಮ್ಮಿಂದಬರಸಿಡಿಲಿನಂತೆ ದೂರ ಮಾಡಿತು’. </p>.<p>‘ಮೌನದಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಪ್ಪ, ಅವರ ಇಚ್ಛೆಯಂತೆ ಜವಾಬ್ದಾರಿಯುತ ವರನೊಂದಿಗೆ ಮದುವೆ ನಿಶ್ಚಿಯಿಸಿದ್ದರು. ಆದರೆ, ಮದುವೆ ಸಂಭ್ರಮದ ಕ್ಷಣಗಳನ್ನು ಕಳೆಯಲು ಅವರು ಈಗ ನಮ್ಮೊಂದಿಗೆ ಇಲ್ಲ.’</p>.<p>‘ಕೆಲವರಿಗೆ ಅಪ್ಪ ಎಂದ ಕೂಡಲೇ ನೆನಪಾಗುವುದುಸಿಡುಕತನ ಹಾಗೂ ಗಂಭೀರ ಸ್ವಭಾವ. ಇದನ್ನು ಅವರು ಜೀವಿಸಿದ್ದ ಅವಧಿಯಲ್ಲಿ ನಾನು ಕಂಡವಳೇ ಅಲ್ಲ. ಇಬ್ಬರು ಹೆಣ್ಣುಮಕ್ಕಳನ್ನೂ ತನ್ನ ಕಣ್ಣುಗಳಂತೆ ಜೋಪಾನ ಮಾಡಿದ್ದರು’.</p>.<p>‘ನಮಗಾಗಿ ಅವರು ಎಷ್ಟೋ ಬಾರಿ ನಿದ್ರೆಯನ್ನು ಮರೆತಿದ್ದರು. ನಮ್ಮ ಜೀವನಕ್ಕೆ ಬುನಾದಿಯಾಗಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಮಾರ್ಗದರ್ಶನ ನಮ್ಮ ಜೀವನದ ಒಂದು ಘಟ್ಟವನ್ನು ಸರಾಗವಾಗಿ ತಲುಪಿಸಿದೆ’.</p>.<p>‘ಭೌತಿಕವಾಗಿ ಅವರಿಲ್ಲದ ದಿನಗಳನ್ನು ಕಳೆಯುವುದು ಸವಾಲಾಗಿದೆ. ಆದರೆ, ಹೆಜ್ಜೆ ಮುಂದಕ್ಕೆ ಸಾಗಲೇಬೇಕು. ಅವರು ನಮ್ಮೊಂದಿಗೆ ಇದ್ದಾರೆ, ನಮ್ಮ ಜೊತೆಗೂಡುತ್ತಾರೆ ಎಂಬ ನಿರೀಕ್ಷಾ ಭಾವ, ಪ್ರತಿ ಹೆಜ್ಜೆಯಲ್ಲೂ ನಮಗೆ ಬಲ ನೀಡುತ್ತಿದೆ’.</p>.<p>‘ಅವರಿದ್ದಾಗ ನಡೆದ ತಂಗಿ ಶಿವಾಲಿಯ ರಂಗಪ್ರವೇಶದ ದಿನ ಎಂದಿಗೂ ಮಾಸುವುದಿಲ್ಲ. ಅಪ್ಪನನ್ನುಬಿಟ್ಟುಒಂದು ದಿನವೂ ಇರಲಾರದ ನಮ್ಮಿಂದ ಅವರು ಬಲುದೂರ ಸಾಗಿದ್ದಾರೆ. ಅವರಿಗೆ ಅಪ್ಪಂದಿರ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾರೆ. ಅವರ ಜೀವಂತಿಕೆಯಲ್ಲಿ ನಮ್ಮ ಪಾಲಿಗೆ ಪ್ರತಿದಿನವೂ ‘ಅಪ್ಪಂದಿರ ದಿನ’.</p>.<p><strong>–ಸೋನಾಲಿ ಮಂಜುನಾಥ್, <span class="Designate">ರಾಜಾಜಿನಗರ, ಬೆಂಗಳೂರು</span></strong></p>.<p><strong><span class="Designate">ನಿರೂಪಣೆ: ಮನೋಹರ್ ಎಂ.</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>