ತಿತಿಮತಿ, ನೊಕ್ಯದ ಅರಣ್ಯದಂಚಿನಲ್ಲಿ ನಿರ್ಮಿಸಿದ್ದ ಭಾರಿ ಗಾತ್ರದ ರೈಲ್ವೆ ಕಂಬಿಗಳನ್ನು ಮುರಿದು ನಾಗರಹೊಳೆ ಅರಣ್ಯದ ಆನೆಗಳು ತಿತಿಮತಿ, ನೊಕ್ಯದ ಕಾಫಿ ತೋಟಕ್ಕೆ ನುಗ್ಗುತ್ತಿದ್ದವು. ಇದರಿಂದ ಅರಣ್ಯ ಇಲಾಖೆ ಈಗ ರೈಲ್ವೆ ಕಂಬಿಗಳನ್ನು ಮರು ನಿರ್ಮಾಣ ಮಾಡುವುದರ ಬದಲು ಮಳೆಯಲ್ಲಿ ನೆಂದು, ಗೆದ್ದಲು ಹಿಡಿದಿರುವ ಹಳೆಯ ಮರದ ದಿಮ್ಮಿಗಳನ್ನು ಸಾಕಾನೆ ಮೂಲಕ ಎಳೆಸಿ ಬೇಲಿ ಹೆಣೆಯುವ ಕೆಲಸಕ್ಕೆ ಮುಂದಾಗಿದೆ.