ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಪ್ರದೇಶ, ಬಳ್ಳಾರಿ ನಾಲಾ ಸುತ್ತಲಿನ ಯಳ್ಳೂರು, ಧಾಮಣೆ, ಹಲಗಾ, ಉಚಗಾವಿ, ಅಲಾರವಾಡ, ಸುಳಗಾ, ದೇಸೂರು, ಸಾಂಬ್ರಾ, ಬಸವನಕುಡಚಿ, ಮುಚ್ಚಂಡಿ, ಅಷ್ಟೆ, ಚಂದಗಡ, ಮುತಗಾ, ಸಾಂಬ್ರಾ, ಮೋದಗಾ, ಸುಳೇಭಾವಿ ಮೊದಲಾದ ಕಡೆಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಈ ತಳಿಯ ಭತ್ತ ಬೆಳೆಯಲಾಗುತ್ತದೆ. ತಾಲ್ಲೂಕಿನಾದ್ಯಂತ 25ಸಾವಿರ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಹಾಕಲಾಗಿದೆ. ಇದರಲ್ಲಿ ಬಳ್ಳಾರಿ ನಾಲಾ ಹಾಗೂ ಮಾರ್ಕಂಡೇಯ ನದಿ ಪ್ರವಾಹದಿಂದ ಸಾವಿರಾರು ಎಕರೆ ಭತ್ತದ ಗದ್ದೆಗಳು ಮುಳುಗಿವೆ. ಈ ಪೈಕಿ ಬೆಳಗಾವಿ ಬಾಸುಮತಿ ಬೆಳೆ 2,600ಸಾವಿರ ಹೆಕ್ಟೇರ್ಗೂ ಜಾಸ್ತಿ ಇದೆ ಎಂದು ಅಂದಾಜಿಸಲಾಗಿದೆ.