ಈ ಕುರಿತು ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಇದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆಯ ನಿರ್ಧಾರ. ಶಿಕ್ಷಣ ಸಚಿವರ ಐಲು–ಪೈಲು ನಿರ್ಧಾರದಿಂದ ರಾಜ್ಯದ ಜನರು ಹಾದಿ, ಬೀದಿಗಳಲ್ಲಿ ನಗುವಂತಾಗಿದೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಎರಡು ಪರೀಕ್ಷೆ ನಡೆಸುವ ಮೊಂಡುತನವನ್ನು ಸರ್ಕಾರ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.