<p>ಬೆಂಗಳೂರು: ‘ವಿಮೆ ಹೊಂದಿದವರು ತಮ್ಮ ಅನಾರೋಗ್ಯದ ಮಾಹಿತಿಯನ್ನು ವಿಮಾ ಕಂಪನಿಗೆ ಮುಂಚಿತವಾಗಿಯೇ ನೀಡಬೇಕು. ಇದು ಅವರ ಕರ್ತವ್ಯ ಕೂಡಾ. ಹಾಗೊಂದು ವೇಳೆ ಮಾಹಿತಿಯನ್ನು ನೀಡದೇ ಇದ್ದಾಗ ವಿಮಾ ಕಂಪನಿ ಪಾಲಿಸಿಯನ್ನು ನಿರಾಕರಿಸಬಹುದು’ ಎಂದು ಹೈಕೋರ್ಟ್ ಆದೇಶಿಸಿದೆ.</p>.<p>ನಗರದ ದಂಪತಿ ವಿಮಾ ಒಂಬುಡ್ಸ್ಮನ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಮೆಡಿಕ್ಲೈಮ್ ಪಾಲಿಸಿ ಎನ್ನುವುದು ಒಂದು ಬಗೆಯ ಒಪ್ಪಂದ. ಆ ಒಪ್ಪಂದ ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತದೆ.ಪಾಲಿಸಿ ಪಡೆದವರಿಗೆ ಮೊದಲೇ ಅನಾರೋಗ್ಯ ಇತ್ತೆಂಬ ಅಂಶದ ಆಧಾರದಲ್ಲಿ ಕಂಪನಿ ಪಾಲಿಸಿಯನ್ನು ನಿರಾಕರಿಸಿದರೆ ಅದರಲ್ಲಿ ದೋಷ ಹುಡುಕಲಾಗದು‘ ಎಂದು ತಿಳಿಸಿದೆ.</p>.<p>ಪ್ರಕರಣವೇನು?: ಅರ್ಜಿದಾರರು 2017ರ ಏಪ್ರಿಲ್ 29ರಂದು ಅನಾರೋಗ್ಯಗಳಿಗೆ ವಿಮಾ ಸೌಲಭ್ಯ ಒದಗಿಸುವ ‘ಹೋಂ ಸುರಕ್ಷಾ ಪ್ಲಸ್’ ಪಾಲಿಸಿ ಮಾಡಿಸಿದ್ದರು. 2020ರ ಆಗಸ್ಟ್ 10ರಂದು ಮಲ್ಟಿಪಲ್ ಸ್ಕೆಲಿರೊಸಿಸ್ನಿಂದ ಬಳಲುತ್ತಿರುವುದಾಗಿ ವೈದ್ಯರಿಂದ ಚಿಕಿತ್ಸೆ ಪಡೆದು, ಆ ವೆಚ್ಚದ ಮರು ಪಾವತಿಗೆ ಹಕ್ಕು ಮಂಡಿಸಿದ್ದರು.</p>.<p>ವಿಮಾ ಕಂಪನಿ ಇದನ್ನು ಪರಿಶೀಲಿಸಿದಾಗ ದಂಪತಿಗೆ ಈ ಕಾಯಿಲೆ ವಿಮೆ ಮಾಡಿಸುವ ಮುನ್ನವೇ ಇದ್ದುದು ಕಂಡು ಬಂದ ಕಾರಣ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದಂಪತಿ ವಿಮಾ ಒಂಬುಡ್ಸಮನ್ಗೆ ದೂರು ಸಲ್ಲಿಸಿ, ಕಂಪನಿಯಿಂದ ₹ 28 ಲಕ್ಷ ಕೊಡಿಸುವಂತೆ ಮನವಿ ಮಾಡಿದ್ದರು. ದಾಖಲೆ ಪರಿಶೀಲಿಸಿದ ಒಂಬುಡ್ಸಮನ್ ದಂಪತಿಯ ಮನವಿಯನ್ನು ತಿರಸ್ಕರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ವಿಮೆ ಹೊಂದಿದವರು ತಮ್ಮ ಅನಾರೋಗ್ಯದ ಮಾಹಿತಿಯನ್ನು ವಿಮಾ ಕಂಪನಿಗೆ ಮುಂಚಿತವಾಗಿಯೇ ನೀಡಬೇಕು. ಇದು ಅವರ ಕರ್ತವ್ಯ ಕೂಡಾ. ಹಾಗೊಂದು ವೇಳೆ ಮಾಹಿತಿಯನ್ನು ನೀಡದೇ ಇದ್ದಾಗ ವಿಮಾ ಕಂಪನಿ ಪಾಲಿಸಿಯನ್ನು ನಿರಾಕರಿಸಬಹುದು’ ಎಂದು ಹೈಕೋರ್ಟ್ ಆದೇಶಿಸಿದೆ.</p>.<p>ನಗರದ ದಂಪತಿ ವಿಮಾ ಒಂಬುಡ್ಸ್ಮನ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಮೆಡಿಕ್ಲೈಮ್ ಪಾಲಿಸಿ ಎನ್ನುವುದು ಒಂದು ಬಗೆಯ ಒಪ್ಪಂದ. ಆ ಒಪ್ಪಂದ ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತದೆ.ಪಾಲಿಸಿ ಪಡೆದವರಿಗೆ ಮೊದಲೇ ಅನಾರೋಗ್ಯ ಇತ್ತೆಂಬ ಅಂಶದ ಆಧಾರದಲ್ಲಿ ಕಂಪನಿ ಪಾಲಿಸಿಯನ್ನು ನಿರಾಕರಿಸಿದರೆ ಅದರಲ್ಲಿ ದೋಷ ಹುಡುಕಲಾಗದು‘ ಎಂದು ತಿಳಿಸಿದೆ.</p>.<p>ಪ್ರಕರಣವೇನು?: ಅರ್ಜಿದಾರರು 2017ರ ಏಪ್ರಿಲ್ 29ರಂದು ಅನಾರೋಗ್ಯಗಳಿಗೆ ವಿಮಾ ಸೌಲಭ್ಯ ಒದಗಿಸುವ ‘ಹೋಂ ಸುರಕ್ಷಾ ಪ್ಲಸ್’ ಪಾಲಿಸಿ ಮಾಡಿಸಿದ್ದರು. 2020ರ ಆಗಸ್ಟ್ 10ರಂದು ಮಲ್ಟಿಪಲ್ ಸ್ಕೆಲಿರೊಸಿಸ್ನಿಂದ ಬಳಲುತ್ತಿರುವುದಾಗಿ ವೈದ್ಯರಿಂದ ಚಿಕಿತ್ಸೆ ಪಡೆದು, ಆ ವೆಚ್ಚದ ಮರು ಪಾವತಿಗೆ ಹಕ್ಕು ಮಂಡಿಸಿದ್ದರು.</p>.<p>ವಿಮಾ ಕಂಪನಿ ಇದನ್ನು ಪರಿಶೀಲಿಸಿದಾಗ ದಂಪತಿಗೆ ಈ ಕಾಯಿಲೆ ವಿಮೆ ಮಾಡಿಸುವ ಮುನ್ನವೇ ಇದ್ದುದು ಕಂಡು ಬಂದ ಕಾರಣ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದಂಪತಿ ವಿಮಾ ಒಂಬುಡ್ಸಮನ್ಗೆ ದೂರು ಸಲ್ಲಿಸಿ, ಕಂಪನಿಯಿಂದ ₹ 28 ಲಕ್ಷ ಕೊಡಿಸುವಂತೆ ಮನವಿ ಮಾಡಿದ್ದರು. ದಾಖಲೆ ಪರಿಶೀಲಿಸಿದ ಒಂಬುಡ್ಸಮನ್ ದಂಪತಿಯ ಮನವಿಯನ್ನು ತಿರಸ್ಕರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>